“ಶಿಕ್ಷಣ ಶಿಲ್ಪಿ” ಪ್ರಶಸ್ತಿಗೆ ಆಯ್ಕೆಯಾದ ಬಾನಹಳ್ಳಿ ಶಾಲೆಯ ಇಂಪಾ ಹಾಗೂ ಹೊಸಕೆರೆ ಶಾಲೆಯ ಅಶ್ವಿನಿ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಕೊಡ ಮಾಡುವ “ಶಿಕ್ಷಣ ಶಿಲ್ಪಿ” ಪ್ರಶಸ್ತಿ ಗೆ ಈ ಸಾಲಿನಲ್ಲಿ ಮೂಡಿಗೆರೆಯ ಇಬ್ಬರು ಶಿಕ್ಷಕಿಯರು ಆಯ್ಕೆಯಾಗಿದ್ದಾರೆ. ಬಣಕಲ್ ಹೋಬಳಿಯ ಬಾನಹಳ್ಳಿ ಶಾಲೆಯ ಶ್ರೀಮತಿ ಇಂಪಾ ಮತ್ತು ಹೊಸಕೆರೆ ಕಾಲೋನಿ ಶಾಲೆಯ ಶ್ರೀಮತಿ ಅಶ್ವಿನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ .