ಮೂಡಿಗೆರೆ :ಯುವಕರಲ್ಲಿ ಕ್ರೀಡಾ ಸ್ಪೂರ್ತಿ ಹೆಚ್ಚಿಸುವ ನಿಟ್ಟಿನಲ್ಲಿಕ್ರೀಡಾಂಗಣದ ಅವಶ್ಯಕತೆಯಿದೆ. ಅಲ್ಲದೆ ಹಿರಿಯ ನಾಗರಿಕರು, ಮಕ್ಕಳು, ವಾಯು ವಿಹಾರಿಗಳಿಗೆ ಅನೂಕೂಲವಾಗಲಿದ್ದು ಕೂಡಲೇ ಕ್ರೀಡಾಂಗಣದ ನಿರ್ಮಾಣಕ್ಕೆ ಜಿಲ್ಲಾಡಳಿತ, ಈ ಭಾಗದ ಜನಪ್ರತಿನಿಧಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಎಂದು ಗ್ರಾಮಸ್ಥ ಆಸೀಫ್ ಹೇಳಿದರು ಆಸೀಫ್ ತಮ್ಮ ಊರಿನ ಗ್ರಾಮಸ್ಥರೊಂದಿಗೆ ಪಲ್ಗುಣಿ ಗ್ರಾ, ಪಂ, ಅಧ್ಯಕ್ಷ ಕವೀಶ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ಚಕಮಕಿಯಲ್ಲಿ ಮೂರು ಎಕರೆ ಜಾಗವಿದ್ದು ಅದನ್ನು ಆಟದ ಮೈದಾನವನ್ನಾಗಿಸಿ,ಹಾಗೂ ಇದರಿಂದ ಗ್ರಾಮದ ಯುವಕರಿಗೆ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಆಟೋಟಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ ಎಂದರು ಗ್ರಾ ಪಂ ಸದಸ್ಯರಾದ ಜಾಬೀರ್ ಹುಸೇನ್ ಮನು ಗ್ರಾಮಸ್ಥ ಆಸಿಫ್,ಹಂಝ, ನಿಯಾಜ್, ಲತಿಫ್ ಹಕೀಮ್ ಅರುಣ ಸುನಿಲ್ ಸಲೀಮ್ ಇದ್ದರು.
