ಬಣಕಲ್ ನ ಬಿ ಎಂ ರಸ್ತೆಯ ರಿವರ್ ವ್ಯೂ ಶಾಲಾ ಮುಂಭಾಗದಲ್ಲಿರುವ ವಿದ್ಯುತ್ ಕಂಬ ಶಿಥಿಲಾವಸ್ಥೆಯಲ್ಲಿದ್ದು ರಸ್ತೆಗೆ ಬಾಗಿದ್ದು ಬೀಳುವ ಹಂತ ತಲುಪಿದ್ದರೂ ಮೆಸ್ಕಾಂ ಅಧಿಕಾರಿಗಳು ತೆರವಿಗೆ ಅಥವಾ ಸರಿಪಡಿಸುವ ಕಾರ್ಯಕ್ಕೆ ಇದುವರೆಗೂ ಮುಂದಾಗಿಲ್ಲ ಇದು ಅಕ್ಕಪಕ್ಕದ ಅಂಗಡಿಯವರ ಆಕ್ರೋಶಕ್ಕೆ ಕಾರಣವಾಗಿದೆ,ಬಣಕಲ್ ಪಟ್ಟಣದ ಚರ್ಚ್ ನ ಮುಖ್ಯ ರಸ್ತೆಯ ಪಕ್ಕದಲ್ಲಿ ವಿದ್ಯುತ್ ಕಂಬದ ರಸ್ತೆಗೆ ,ಬೀಳುವ ಹಂತ ತಲುಪಿದೆ ರಸ್ತೆ ಕಾರ್ಯ ನಡೆಯುತ್ತಿರುವುದರಿಂದ ಇದರ ಬಗ್ಗೆ ಎರಡು ದಿನದ ಹಿಂದೆ ಬಣಕಲ್ ಮೆಸ್ಕಾಂಗೆ ದೂರು ಸಲ್ಲಿಸಿದರೂ ಇದುವರೆಗೂ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ, ಶಿಥಿಲಾವಸ್ಥೆಯಲ್ಲಿ ಕಂಬ ಇರುವುದರಿಂದ ಸ್ಥಳೀಯರು ಭಯದಲ್ಲಿಯೇ ಓಡಾಡಬೇಕಿದೆ. ಇದೇ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದೆ. ಹೆಚ್ಚಿನ ಅವಘಡ ಸಂಭವಿಸುವ ಮುಂಚೆ ಎಚ್ಚತ್ತುಕೊಳ್ಳದಿದ್ದರೆ ಮೆಸ್ಕಾಂ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕ್ರೇಜಿ ಮೊಬೈಲ್ ಮಾಲೀಕ ಅರುಣ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ, ಪಕ್ಕದಲ್ಲಿಯೇ ಖಾಸಗಿ ಶಾಲೆಯೊಂದು ಇದ್ದು ನಿತ್ಯ ಮಕ್ಕಳು ಸಂಚರಿಸುವ ಸ್ಥಳವಾಗಿದೆ ಅಲ್ಲದೆ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಆಟೋ ನಿಲ್ದಾಣವು ಇದ್ದು ನಿತ್ಯ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು, ರೈತರು ಸೇರಿದಂತೆ ನೂರಾರು ಜನ ಸಂಚರಿಸುವ ತಾಣವಾಗಿದೆ ಇಂತಹ ಅತಿ ಸೂಕ್ಷ್ಮ ಪ್ರದೇಶದಲ್ಲಿರುವ ವಿದ್ಯುತ್ ಕಂಬವನ್ನುಸರಿ ಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ 2ದಿನದ ಹಿಂದೆಯೇ ದೂರನ್ನು ನೀಡಿದ್ದರೂ ಇದುವರೆಗೂ ಕಾಮಗಾರಿ ಕೈಗೊಳ್ಳದೆ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿದ್ದು ಕೂಡಲೆ ಸಂಬಂಧ ಪಟ್ಟ ಅಧಿಕಾರಿಗಳು ಈ ಅವ್ಯವಸ್ಥೆಯನ್ನ ಸರಿಪಡಿಸ ಬೇಕೆಂದು ಆಗ್ರಹಿಸಿದ್ದಾರೆ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೆಸ್ಕಾಂ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ,
