ಬದುಕಿನ ಜಂಜಾಟಗಳ ನಡುವೆ ನಿರತವಾಗಿರುವ ಕುಟುಂಬಗಳ ಸದಸ್ಯರನ್ನು ಒಂದೆಡೆ ಸೇರುವಂತೆ ಮಾಡುವ ಹಬ್ಬಗಳು ಸಂಬಂಧಗಳನ್ನು ಬೆಸೆಯುವ ವೇದಿಕೆಯಾಗಲಿ ಎಂದು ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದಿಂದ ಬಣಕಲ್, ಬಾಳೂರು, ಹಿರೇಬೈಲ್ ಸೇರಿದಂತೆ ವಿವಿದೆಡೆ ನಡೆದ ಓಣಂ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಓಣಂ ಹಬ್ಬದ ಸಂದರ್ಭದಲ್ಲಿ ಮಹಾಬಲಿ ಚಕ್ರವರ್ತಿ ಮನೆಗೆ ಬಂದು ಹರಸುತ್ತಾನೆ ಎಂಬ ನಂಬಿಕೆ ಇದ್ದು ಮನೆಯ ಅಂಗಳದಲ್ಲಿ ಪೂಕ್ಕಳಂ ಎಂಬ ಹೂವಿನ ರಂಗೋಲಿ ಬಿಡಿಸಿ ನಡುವೆ ದೀಪ ಹಚ್ಚಿಟ್ಟು ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಸಂಪ್ರದಾಯವಿದೆ ಎಂದರು.
ಹಬ್ಬದ ದಿನದ ವಿಧವಿಧವಾದ ಅಡುಗೆ ಮಾಡಿ ಮನೆ ಮಂದಿ ಎಲ್ಲಾ ಒಟ್ಟಾಗಿ ಹಬ್ಬದಡುಗೆ ಮಾಡೊ ಸಂಭ್ರಮಿಸುವುದು ಈ ಹಬ್ಬದ ವಿಶೇಷವಾಗಿದೆ. ಸಾಂಪ್ರಾದಯಿಕ ಉಡುಪು ತೊಟ್ಟು ಸಂಬಂಧಿಕರ ಮನೆಗಳಿಗೆ ಬೇಟಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪಧಾಧಿಕಾರಿಗಳು ಹಾಜರಿದ್ದರು.