ಬಣಕಲ್ :ಮುಂಗಾರು ಹಂಗಾಮಿನ ಬಿತ್ತನೆ ಸಬ್ಸಿಡಿ ಬೀಜ ಪಡೆಯಲು ಮತ್ತು ಬ್ಯಾಂಕ್ಗಳಿಂದ ಕೃಷಿ ಸಾಲ ಪಡೆಯಲು ಅಗತ್ಯವಿರುವ ಜಮೀನಿನ ಪಹಣಿ ಪತ್ರ ಹಾಗೂ ಮತ್ತಿತರ ಸಂಬಂಧಿಸಿದ ದಾಖಲೆ ಪಡೆಯಲು ರೈತಾಪಿ ಜನರು, ವಿದ್ಯಾರ್ಥಿಗಳು ನಿತ್ಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ.
ಬಣಕಲ್ ನೆಮ್ಮದಿ ಕೇಂದ್ರದಲ್ಲಿ ವಿತರಣೆ ಮಾಡುವ ಪಹಣಿ ಕೇಂದ್ರದ ಮುಂದೆ ನಿತ್ಯ ನೂರಾರು ರೈತರು ಪಹಣಿ ಪಡೆಯಲು ಮುಂದಾದರೆ, ಸಮಯಕ್ಕೆ ಪಹಣಿ ನೆಮ್ಮದಿಯಿಂದ ದಾಖಲೆ ದೊರೆಯದೆ ಪರದಾಡುವಂತಾಗಿದೆ. ಇಲ್ಲಿನ ಪಹಣಿ ಕೇಂದ್ರದ ಸಿಬ್ಬಂದಿಗೆ ಕೆಲಸ ಹೊರೆಯಾದರೆ, ಮತ್ತೊಂದಡೆ ರೈತರು ಪಹಣಿಗಾಗಿ ದಿನವಿಡೀ ಕಾದು ನಿಲ್ಲುವಂತಾಗಿದೆ ದಿನವಿಡೀ ಕಾಯಬೇಕು..
ಪಹಣಿ ಪಡೆಯಲು ಸೋಮವಾರ ಸರಣಿಗೆ ಬೆಳಗಿನಿಂದ ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ದಿನವಿಡೀ ಕಾದು ನಿಲ್ಲಬೇಕಾಗಿದೆ . ಇದಕ್ಕೆ ಹೊರತಲ್ಲ ಎನ್ನುವಂತೆ ಶಾಲಾ ದಾಖಲಾತಿಗಾಗಿ ನೆಮ್ಮದಿ ಕೇಂದ್ರಗಳ ಮುಂದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ಕೂಡ ದಿನವೀಡಿ ಸರಣಿಗೆ ನಿಂತುಕೊಳ್ಳುವಂತಾಗಿದೆ.
ಪಹಣಿಗಾಗಿ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗಾಗಿ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಬಂದು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿದ್ದು ತೀವ್ರ ತೊಂದರೆಯಾಗಿದೆ. ಸರಣಿಗೆ ನಿಂತು ಕಾಲು ನೋವಾಗಿ ಸರಣಿಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ನೆಮ್ಮದಿ ಸ್ಥಗಿತ: ತಾಲೂಕಿನ ನೆಮ್ಮದಿ ಕೇಂದ್ರಗಳಲ್ಲಿನ ಪಹಣಿ ವಿತರಣೆ ಕಾರ್ಯ ನಡೆಯುತ್ತಿಲ್ಲ. ಸರ್ವರ್ ಡೌನ್ ಇದೆ ನಾವೇನು ಮಾಡಬೇಕು, ನಾಳೆ ಬನ್ನಿ ಎನ್ನುತ್ತಾರೆ ಅಲ್ಲಿಯ ಸಿಬ್ಬಂದಿ.
ವಿದ್ಯುತ್ ತೊಂದರೆ ಇಷ್ಟಾಗುವುದರಲ್ಲಿ ಊಟದ ಸಮಯವಾಯಿತೆಂದು ಹೋದರೆ, ಎರಡ್ಮೂರು ಗಂಟೆಯಾದರು ನೆಮ್ಮದಿ ಕೇಂದ್ರಕ್ಕೆ ಸಿಬ್ಬಂದಿ ಮರಳಿ ಬರುವುದೇ ಇಲ್ಲ.
ಹೀಗಾಗಿ ತಾಲೂಕು ಕೇಂದ್ರ ಪಹಣಿ ದೊರೆಯುತ್ತದೆ ಎಂದು ನಂಬಿ ಬಂದವರಿಗೆ ಸರಣಿಯಲ್ಲೇ ದಿನ ಕಳೆಯುಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಸತೀಶ್ ಆಗ್ರಹ ಎಲ್ಲ ಭಾಗದ ನೆಮ್ಮದಿ ಕೇಂದ್ರಗಳು ಕಾರ್ಯನಿರ್ವಹಿಸದೆ ಇರುವುದರಿಂದ ಮೂಡಿಗೆರೆ ತಾಲ್ಲೂಕು ಕಚೇರಿಗೆ ಹೋಗಬೇಕಿದೆ ಅಲ್ಲಿಯೂ ಸಹ ಸರ್ವರ್ ತೊಂದರೆ ಎಂದು ಉತ್ತರ ಸಿಗುತ್ತದೆ ಕಳೆದ ಹದಿನೈದು ದಿನಗಳಿಂದ ಬಣಕಲ್ ಮೂಡಿಗೆರೆಗೆ ಅಲೆದಾಡಿ ರೈತರು ಕಂಗಾಲಾಗಿದ್ದಾರೆ ಪಹಣಿ ಕೇಂದ್ರಕ್ಕೆ ಹೆಚ್ಚಿನ ರೈತರು ಬರುತ್ತಿರುವುದೇ ಸಮಸ್ಯೆಗೆ ಕಾರಣವಾಗುತ್ತಿದೆ .
ಪ್ರತ್ಯೇಕ ವ್ಯವಸ್ಥೆ ಆಗಬೇಕು, ಇಲ್ಲವೇ ಆಯಾ ನೆಮ್ಮದಿ ಕೇಂದ್ರಗಳಲ್ಲಿ ಪಹಣಿ ವಿತರಣೆ ಆದಷ್ಟು ಬೇಗ ಶುರುಮಾಡಿದರೆ ಮಾತ್ರ ಸಮಸ್ಯೆ ತೆರೆ ಬೀಳುತ್ತದೆ. ಇಲ್ಲವಾದಲ್ಲಿ ಜನರಿಗೆ ಪರದಾಟ ತಪ್ಪಿದ್ದಲ್ಲ.
ಗಣಕ ಯಂತ್ರದಿಂದ ಪಹಣಿ ಪತ್ರ ಪಡೆಯಲು ದಿನಗಟ್ಟಲೆ ಸರತಿಯಲ್ಲಿ ನಿಂತರೂ ಪಹಣಿ ಪತ್ರ ಸಮಯಕ್ಕೆ ದೊರಕದೆ ರೈತರು ಪರದಾಡಿದ್ದಾರೆ.

ಸರದಿಗಾಗಿ ದಿನವಿಡಿ ಸಮಯ ಹಾಳು ಮಾಡಿಕೊಂಡರು ತಮ್ಮ ಸರದಿ ಬರುತ್ತದೇ ಎನ್ನುವ ಗ್ಯಾರಂಟಿ ಇರುವುದಿಲ್ಲ. ಪದೇ ಪದೇ ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ರೈತರು ಮತಷ್ಟು ನೋವು ಅನುಭವಿಸುವಂತಾಗಿದೆ. ವಿದ್ಯುತ್ ಪೂರೈಕೆ ಸರಿಯಾಗಿ ಇಲ್ಲದಿರುವುದು ರೈತರಿಗೆ ಸಕಾಲದಲ್ಲಿ ಪಹಣಿ ದೊರೆಯುತ್ತಿಲ್ಲ. ಕಂದಾಯ ಇಲಾಖೆಯವರು ಪಹಣಿ ಪತ್ರಗಳನ್ನು . ನೆಮ್ಮದಿ ಕೇಂದ್ರಗಳಲ್ಲೂಆದಷ್ಟು ಬೇಗ ಪಹಣಿ ಪಡೆಯಲು ಅವಕಾಶ ಕಲ್ಪಿಸಬೇಕು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆಸಿದ್ದೇನೆ ಆದಷ್ಟು ಶೀಘ್ರದಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು