ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಗಗನ್ ಹೆಗ್ಗುಡ್ಲು ಆಯ್ಕೆ

ಬಣಕಲ್ :ಮೂಡಿಗೆರೆ ತಾಲ್ಲೂಕ್ಕಿನ ಬಣಕಲ್ ಹೋಬಳಿಯ ಹೆಗ್ಗೋಡ್ಲು ಗ್ರಾಮದ ವಾಸಿಯಾದ ಗಗನ್ ರವರು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಬಣಕಲ್ ಹೆಗ್ಗುಡ್ಲು ವಾಸಿ ಗಿರೀಶ್ ಮತ್ತು ಗಾಯಿತ್ರಿ ದಂಪತಿಯರ ಪುತ್ರನಾಗಿರುವ ಗಗನ್ ರವರು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿ ಕೆಪಿಎಸ್ಸಿ ಕರ್ಮಕಾಂಡವನ್ನು ಎತ್ತಿ ಹಿಡಿದು. ಕೆಎಎಸ್ ಮರು ಪರೀಕ್ಷೆ ಮಾಡಲೇಬೇಕೆಂದು ಸರ್ಕಾರದ ಎದುರು ಪ್ರತಿಭಟಿಸಿ ಗೆಲುವು ಕಂಡಿರುತ್ತಾರೆ. ಹಾಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತು ಪಡಿಸುವಲ್ಲಿ ಯಶಸ್ಸು ಕಂಡಿದ್ದಾರೆ ಹೀಗೆ ಸಮಾಜದಲ್ಲಿ ನಡೆಯುವ ಹಲವಾರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಸರಕಾರದ ಗಮನ ಸೆಳೆಯುವುದರಲ್ಲಿ ಗಗನ್ ರವರು ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲೂ ಕೂಡ ಅವರು ಜನಪರ ಧ್ವನಿ ಆಗಲಿ ಎಂಬುದು ಗ್ರಾಮಸ್ಥರ ಆಶಯ.

ವರದಿ: ✍️ಸೂರಿ ಬಣಕಲ್