ಬಣಕಲ್ : ನಗರದಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವ ದತ್ತ ಜಯಂತಿ ಅಗವಾಗಿ ಸೋಮವಾರ ಏರ್ಪಡಿಸಿದ್ದ ಶೋಭಾಯಾತ್ರೆ ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯಿಂದ ಜರುಗಿತು. ತಾಲ್ಲೂಕ್ಕಿನ ವಿವಿಧೆಡೆಯಿಂದ ಆಗಮಿಸಿದ್ದ ದತ್ತಮಾಲಾಧಾರಿಗಳು ಶೋಭಾಯಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಯಾತ್ರೆ ಸಾಗಿಹೋದ ರಸ್ತೆಗಳು ಕೇಸರಿಮಯವಾಗಿ ಕಂಗೊಳಿಸಿದವು.
ಬಣಕಲ್ ಶ್ರೀ ಮಹಮ್ಮಾಯಿ ದೇವಸ್ಥಾನ ದಿಂದ ಮಧ್ಯಾಹ್ನ 4 ಗಂಟೆಗೆ ಪೂಜೆ ನೆರೆವೇರಿದ ಬಳಿಕ ಶೋಭಾಯಾತ್ರೆಗೆ ಚಾಲನೆ ದೊರೆಯಿತು. ವಿಎಚ್ಪಿ ಮತ್ತು ಬಜರಂಗದಳ ಮುಖಂಡರು ಸ್ಥಳದಲ್ಲಿದ್ದರು.
ಮಹಮ್ಮಾಯಿ ದೇವಸ್ಥಾನದಿಂದ ಹೊರಟು ಬಣಕಲ್ ಮುಖ್ಯರಸ್ತೆ, ಮೂಲಕ ಬೃಹತ್ ಶೋಭಾಯಾತ್ರೆ ಸಾಗಿತು. ಕೇಸರಿ ಮಾಲೆ, ಪೇಟ ಹಾಕಿದ್ದ ಬಹುತೇಕರು ಕೈಯಲ್ಲಿ ಭಗವಾಧ್ವಜ ಹಿಡಿದು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು.ಭಜನೆ ಕುಣಿತ, ಚಂಡೆ ಕುಣಿತ ಶೋಭಾ ಯಾತ್ರೆಗೆ ಮೆರಗು ತಂದವು.ಅಲಂಕೃತ ದತ್ತಾತ್ರೇಯ ಮೂರ್ತಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಬಣಕಲ್ ಪಿ ಎಸ್ ಐ ರೇಣುಕಾ ಹಾಗೂ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕೈಗೊಂಡಿದ್ದರು.
ವರದಿ ✍️ಸೂರಿ ಬಣಕಲ್