ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಣಕಲ್ ವಿದ್ಯಾಭಾರತಿ ವಿದ್ಯಾಸಂಸ್ಥೆಯಿಂದ 8ವಿಶೇಷ ಚೇತನ ಸಾಧಕರಿಗೆ ಸನ್ಮಾನ

ಬಣಕಲ್: 15.06.2024ರಂದು ಶ್ರೀ ವಿದ್ಯಾ ಭಾರತಿ ವಿದ್ಯಾ ಸಂಸ್ಥೆ ಬಣಕಲ್ ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಬಹಳ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ನೆರವೇರಿತುಕಾರ್ಯಕ್ರಮದ ಮೊದಲಿಗೆ ಸಂಸ್ಥೆಯ ಪೂರ್ವಾಧ್ಯಕ್ಷರಾದ ಬಿ . ರಮೇಶ್ ಧ್ವಜಾರೋಹಣ ಮಾಡಿದರು . ಶಾಲೆಯ ವಿದ್ಯಾರ್ಥಿಗಳಿಂದ ಧ್ವಜವಂದನೆಯ ನಂತರ ವಿದ್ಯಾರ್ಥಿಗಳು ಘೋಷಣೆಯನ್ನು ಕೂಗುತ್ತಾ ಬಣಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಬಣಕಲ್ ಭಾಗದ ಒಟ್ಟು 8 ವಿಶೇಷ ಚೇತನ ಸಾಧಕರನ್ನು ಗೌರವಿಸಿ . ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಬಿ.ಶಿವರಾಮ ಶೆಟ್ಟಿ. ಸಮಾಜದಲ್ಲಿ ದೈಹಿಕವಾಗಿ ಸದೃಢವಾಗಿರುವವರು ಮಾಡುವ ಸಾಧನೆಗಿಂತ ಅಂಗವೈಕಲ್ಯವಿರುವ ವಿಶೇಷ ಚೇತನರು ಸ್ವಾಭಿಮಾನದಿಂದ ಸ್ವಾವಲಂಬಿಗಳಾಗಿ ಬದುಕುವುದೇ ಒಂದು ಸಾಧನೆಯಾಗಿದೆ.ಆದ್ದರಿಂದ ಮಕ್ಕಳು ಅವರನ್ನು ಗೌರವದಿಂದ ಕಾಣುವುದರ ಜೊತೆಗೆ ಅವಶ್ಯಕ ಸಂದರ್ಭದಲ್ಲಿ ಅವರಿಗೆ ನೆರವಾಗುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು. ಗೌರವವನ್ನು ಸ್ವೀಕರಿಸಿ ಮಾತನಾಡಿದ ಶ್ರೀಮತಿ ಶಶಿಕಲಾ ಪ್ರಮೋದ್ ಮತ್ತು ಗಿರೀಶ್ ಭಂಡಾರಿ ಮಾತನಾಡಿ ತಮ್ಮ ವಿದ್ಯಾಭ್ಯಾಸ ಮತ್ತು ಜೀವನ ಅದರಲ್ಲೂ ಸಮಾಜದಲ್ಲಿ ವಿಶೇಷ ಚೇತನರು ಎದುರಿಸುತ್ತಿರುವ ಸವಾಲುಗಳನ್ನು ತಿಳಿಸಿದರು. ಮತ್ತು ವಿದ್ಯಾರ್ಥಿಗಳು ಯಾವುದೇ ರೀತಿಯ ಮಾನಸಿಕ ಒತ್ತಡಗಳಿಗೆ ಒಳಗಾಗದೆ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಮರ್ಕಲ್ ಸತೀಶ್ ಮಾತನಾಡಿ ನಮ್ಮಂತಹ ವಿಶೇಷ ಚೇತನರನ್ನು ಗುರುತಿಸಿ ಗೌರವಿಸಿದ ಸಂಸ್ಥೆಗೆ ಧನ್ಯವಾದಗಳನ್ನು ಸಮರ್ಪಿಸಿ ಪ್ರತಿಯೊಬ್ಬರೂ ಜೀವನದಲ್ಲಿ ಯಾವುದೇ ಕೀಳರಿಮೆಯಿಲ್ಲದೆ ಛಲದಿಂದ ಬದುಕುನಡೆಸಿದರೆ ಸಾಧನೆ ಹಾದಿಯಲ್ಲಿ ನಡೆಯಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಶೇಷ ಚೇತನ ವ್ಯಕ್ತಿಗಳಾದ ರೀನಾ ರೋಡ್ರಿಗಸ್. ಇಂತ್ರು ಕರ್ನಲಿಯೋ, ಸ್ವಾಮಿ, ಹಮ್ಜದ್ ಖಾನ್, ಪೂರ್ಣೇಶ್ ಮೂರ್ತಿ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗಳಿಗೆ ಸಿಹಿ ವಿತರಿಸಿದ ಉಧ್ಯಮಿ ದಿನೇಶ್ ಶೆಟ್ಟಿ ಬಣಕಲ್. ಇವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಲಾ ಸಮಿತಿಯ ಉಪಾಧ್ಯಕ್ಷರಾದ ಬಿ.ಇ.ಸುಬ್ರಾಯಗೌಡ.ಕಾರ್ಯದರ್ಶಿ, ಬಿ.ಪಿಲಿಂಗಪ್ಪ. ಕೋಶಾಧ್ಯಕ್ಷರಾದ ಯು.ಪಿ. ರಾಮಚಂದ್ರಹೊಳ್ಳ. ನಿರ್ದೇಶಕರಾದ ಬಿ.ಬಿ.ಮಂಜುನಾಥ್. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಮಾಲತಿ.ಟಿ.ಆರ್. ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ನಾಗರಾಜು.ಸಿ. ಉಪಮುಖ್ಯಶಿಕ್ಷಕರಾದ ವಸಂತ್ ಹಾರ್ಗೋಡು.ಶಿಕ್ಷಕರಾದ ಶೇಖರಪ್ಪ. ಭಕ್ತೇಶ್ .ವಿಜಯೇಂದ್ರ. ಲೀಲಾಮಣಿ. ಕುಸುಮ ಎಸ್ ಶೆಟ್ಟಿ .ಗೀತಾ. ಕಮಲಮ್ಮ. ಶ್ವೇತ. ಪದ್ಮಶ್ರೀ. ಆಶಾ. ಅಶ್ವಿತಾ. ಲೋಕೇಶ್. ಲಿಂಗರಾಜು. ಪ್ರತಾಪ್. ಪೂಜಾ. ಅನುಪ. ಅನುಷಾ. ಆರೋಗ್ಯ ವಾಣಿ. ಶಾಲಾ ಅಡುಗೆ ಸಿಬ್ಬಂದಿ. ಪೋಷಕರು ಶಾಲಾ ವಾಹನ ಚಾಲಕರು ಭಾಗವಹಿಸಿದ್ದರು.