ಬಣಕಲ್ ನ್ಯೂಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ:ಮತ್ತಿಕಟ್ಟೆ ಬಾಯ್ಸ್ ಪ್ರಥಮ

ಬಣಕಲ್ ನ್ಯೂಸ್ ವತಿಯಿಂದ ಬಣಕಲ್ ನಲ್ಲಿ ಶ್ರೀ ಕೃಷ್ಣಾಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವ ಅತ್ಯಂತ ಶ್ರದ್ಧೆ, ಭಕ್ತಿ, ಸಂಭ್ರಮ, ಸಡಗರದಿಂದ ಭಾನುವಾರ ನಡೆಯಿತು.ಜನಸಾಗರದ ನಡುವೆ ಮೊಸರು ಕುಡಿಕೆ ಸ್ಪರ್ಧೆ ನೋಡುಗರಿಗೆ ಹಬ್ಬದ ರಸದೌತಣವನ್ನು ನೀಡಿತು. ಸ್ಪರ್ಧೆಯಲ್ಲಿ ಹಲವು ತಂಡಗಳು ಭಾಗವಹಿಸಿ ಕ್ರೀಡಾಸ್ಫೂರ್ತಿ ಮೆರೆದರು.

ಮೊಸರು ಕುಡಿಕೆ ಹೊಡೆಯುವ ಮುನ್ನ ಮೊಸರು, ನೀರು, ಹಾಲು, ನಾನಾ ವಸ್ತುಗಳನ್ನು ಮಣ್ಣಿನ ಮಡಕೆಯಲ್ಲಿ ಹಾಕಿ ಎತ್ತರದ ಕಮಾನುಗಳಲ್ಲಿ ಕಟ್ಟಲಾಗಿತ್ತು. ಸಾಹಸಿ ಯುವಕರ ತಂಡ ಇದನ್ನು ಹೊಡೆದುಕೊಂಡು ಬರುವ ದ್ರಶ್ಯ ಮನಮೋಹಕವಾಗಿತ್ತು.

ಕಾರ್ಯಕ್ರಮದ ಅಂಗವಾಗಿ ನಡೆದ ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಮತ್ತಿಕಟ್ಟೆ ಬಾಯ್ಸ್ ಯುವಕರ ತಂಡ ಮೊದಲ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಗೆ ಮುತ್ತಿಕ್ಕಿದರು. ದ್ವಿತೀಯ ಸ್ಥಾನವನ್ನು ದುರ್ಗಾಪರಮೇಶ್ವರಿ ಸಬ್ಳಿ ಪಡೆದುಕೊಂಡರು.ತೃತೀಯ ಸ್ಥಾನವನ್ನು ಸನ್ ಶೈನ್ ಬಣಕಲ್ ಪಡೆದುಕೊಂಡರೆ 4ನೇ ಸ್ಥಾನವನ್ನು ಕಾವು ಬಾಯ್ಸ್ ಬಣಕಲ್ ಪಡೆದುಕೊಂಡರು.

ವರದಿ :ಸೂರಿ ಬಣಕಲ್