ಚಿಕ್ಕಮಗಳೂರು ಜಿಲ್ಲೆಯ ಇತಿಹಾಸದಲ್ಲೆ ಮೊದಲ ಬಾರಿಗೆ ಬಣಕಲ್ ಗ್ರಾಮದಲ್ಲಿ ರಿವರ್ಸ್ ಆಟೋ ರಿಕ್ಷಾ ಚಾಲನೆ ಸ್ಪರ್ಧೆ ನಡೆಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಣಕಲ್ ನ್ಯೂಸ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಟೋ ರೇಸ್ ಗೆ ಚಾಲನೆ ನೀಡಿದ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ರವರು ಚಾಲಕರಿಗೆ ಶುಭ ಹಾರೈಸಿದರು. ನೋಡುಗರನ್ನು ರೋಮಾಂಚನಗೊಳಿಸಿದ ಸ್ಪರ್ಧೆಯಲ್ಲಿ ಆಟೋ ಚಾಲಕರು ಗಮನಾರ್ಹ ವೇಗದಲ್ಲಿ ಹಿಮ್ಮುಖವಾಗಿ ಓಡಿಸಿದರು ಗೆಲುವಿನ ಗೆರೆಯನ್ನು ಸುರಕ್ಷಿತವಾಗಿ ತಲುಪಲು ತಮ್ಮ ಭುಜಗಳ ಮೇಲೆ ಹಿಂತಿರುಗಿ ನೋಡುತ್ತಿರುವಾಗ ಪೂರ್ಣ ವೇಗದಲ್ಲಿ ಆಟೋ-ರಿಕ್ಷಾ ಚಾಲಕರು ಹಿಮ್ಮುಖವಾಗಿ ಓಡಿಸುವ ದೃಶ್ಯ ಜನರಿಗೆ ಮನರಂಜನೆ ಒದಗಿಸಿದರು. ಲೈವ್ ಕಾಮೆಂಟರಿಯೊಂದಿಗೆ, ಓಟದ ಒಂದು ನೋಟವನ್ನು ಪಡೆಯಲು ಮತ್ತು ಭಾಗವಹಿಸುವವರಿಗೆ ಹುರಿದುಂಬಿಸಲು ಜನಸಮೂಹವು ಒಟ್ಟುಗೂಡಿತು.
ಆಟೋ ರಿವರ್ಸ್ ರೇಸ್ ಸ್ಪರ್ಧೆಯಲ್ಲಿ ಮೂಡಿಗೆರೆಯ ಅರುಣ್ ಎಂಬುವವರು ಪ್ರಥಮ ಸ್ಥಾನ ಪಡೆದರು.ದ್ವಿತೀಯ ಸ್ಥಾನವನ್ನು ಬಣಕಲ್ ನ ಪವಾಜ್ ರವರು ಪಡೆದುಕೊಂಡರು. ತೃತೀಯ ಸ್ಥಾನ ನೇಮ್ ರಾಜ್ ಸಬ್ಳಿ ಪಡೆದಿಕೊಂಡರೆ ನಾಲ್ಕನೇ ಸ್ಥಾನವನ್ನು ರೋಹಿತ್ ಸಬ್ಳಿ ಪಡೆದುಕೊಂಡರು.
ವರದಿ ಸೂರಿ ಬಣಕಲ್