ಬಜರಂಗದಳ ನಿಷೇದ ಕುರಿತು ವಿ.ಎಚ್.ಪಿ ಬಣಕಲ್ ಕಾರ್ಯದರ್ಶಿ ಅರುಣ್ ಪೂಜಾರಿ ಆಕ್ರೋಶ

ಬಣಕಲ್ :ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇದ ಕುರಿತು ಉಲ್ಲೇಖ ಮಾಡಿದ್ದು ಹಿಂದೂ ಸಂಘಟನೆಗಳಿಂದ ಕಾಂಗ್ರೆಸ್ ವಿರುದ್ಧ ವ್ಯಾಪಾಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಣಾಳಿಕೆ ಹಿಂದೂ ವಿರೋಧಿ ಪ್ರಣಾಳಿಕೆಯಾಗಿದ್ದು ದೇಶಭಕ್ತ ಸಂಘಟನೆಯಾದ ಬಜರಂಗದಳವನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದೆ ಇದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಎಂದು ವಿ. ಎಚ್. ಪಿ. ಕಾರ್ಯದರ್ಶಿ ಅರುಣ್ ಪೂಜಾರಿ ಆಕ್ರೋಶ ಹೊರಹಾಕಿದ್ದಾರೆ.ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು
ಬಜರಂಗದಳ ನಿಷೇಧ ಮಾಡುತ್ತೇವೆ ಈ ಮೂಲಕ ಬಜರಂಗ ಕಾರ್ಯಕರ್ತರ ಕೆಲಸ ಕಾರ್ಯಗಳಿಗೆ ಅಂಕುಶ ಹಾಕುತ್ತೇವೆ, ಮಟ್ಟ ಹಾಕ್ತೆವೆ ಅಂದ್ರೆಅದು ಕೇವಲ ನಿಮ್ಮ ಭ್ರಮೆ ಎಂದರು.ಬಜರಂಗ ಆರಂಭವಾಗಿದ್ದೇ ಸಂಘರ್ಷದಿಂದ ಸಂಘರ್ಷಕ್ಕಾಗಿ. ಸೇವಾ ಸುರಕ್ಷ ಸಂಸ್ಕಾರ ಎಂಬ ದ್ಯೇಯ ವಾಕ್ಯವನ್ನು ಇಟ್ಟುಕೊಂಡು ಇಡೀ ದೇಶದಾದ್ಯಂತ ಬಜರಂಗ ದಳ ಕೆಲಸ ಮಾಡುತ್ತಿದೆ, ಬಜರಂಗದಳ ಯಾವತ್ತು ದೇಶ ವಿರೋದ ಕ್ರತ್ಯ ನಡೆಸಿಲ್ಲ, ಹಿಂದು ವಿರೋದಿ ಕ್ರತ್ಯ ನಡೆಸಿಲ್ಲ, ಅಮಾಯಕರಿಗೆ ಹಲ್ಲೆ ನಡೆಸಿಲ್ಲ, ಪೋಲಿಸ್ ಸ್ಟೇಷನ್ ಗೆ ಬೆಂಕಿ ಕೊಟ್ಟಿಲ್ಲ,ಆದರೂ ಕೂಡ ನಿಷೇಧ ಮಾಡ್ತೇವೆ ಎಂದು ಹೇಳಿ ತಿರುಗಾಡುತ್ತಾರೆ.ಕೇವಲ ವೋಟ್ ಬ್ಯಾಂಕ್ ಗಾಗಿ , ಒಂದು ವರ್ಗದ ತುಷ್ಟಿಕರಣಕ್ಕಾಗಿ ಇವತ್ತು ಕಾಂಗ್ರೆಸ್ ಪಕ್ಷದ ಮುಖಂಡರೆಲ್ಲಾ ಸೇರಿಕೊಂಡು ಇವತ್ತು ಬಜರಂಗದಳ ನಿಷೇಧ . ಮಾಡುವುದಾದರೆ ನಾವು ಕೂಡ ಸಂಕಲ್ಪ ‌ಮಾಡುತ್ತೇವೆ ಮತ್ತು ನಿಮಗೊಂದು ಸವಾಲನ್ನು ಹಾಕುತ್ತೇವೆ, ಎಸ್.ಡಿ.ಪಿ.ಐ ನ ಜೊತೆ ಸಂಧಾನ ಮಾಡಿಕೊಂಡು ಬಜರಂಗ ನಿಷೇದ ಮಾಡುವುದಾದರೆ ಇವತ್ತು ದಳದ ಎಲ್ಲಾ ಕಾರ್ಯಕರ್ತರು ರಾಷ್ಟ್ರೀಯ ಪಕ್ಷಕ್ಕಾಗಿ ಬಿ.ಜೆ.ಪಿ ಜೊತೆ ಸೇರಿಕೊಂಡು ಕಾಂಗ್ರೆಸ್ ಸೋಲಿಸುವ ಕೆಲಸ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದಾರೆ,
ಬಜರಂಗದಳ ಕೆಣಕಿದ್ದಾರೆ, ಕಾರ್ಯಕರ್ತರು ಎನು‌ ಮಾಡುತ್ತಾರೆ ಎಂಬುದು ಮುಂದಿನ ಚುನಾವಣೆ ಫಲಿತಾಂಶದಲ್ಲಿ ಗೊತ್ತಾಗಲಿದೆ, ಹಾಗೆಯೆ ಎಲ್ಲಾ ಕಾರ್ಯಕರ್ತರು ಚುನಾವಣೆಯಲ್ಲಿ ಕಾಂಗ್ರೆಸ್ ನ ಎಲ್ಲಾ ಅಭ್ಯರ್ಥಿಗಳ ವಿರುದ್ದವಾಗಿ ರಾಜಕೀಯ ‌ಪಕ್ಷದ‌ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಹಿಂದುತ್ವದ ಪರವಾಗಿ ಇರುವ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ. ಕಾಂಗ್ರೆಸ್ ಹಾಕಿದ ಆ ಎಲ್ಲಾ ಸವಾಲುಗಳಿಗೆ ಉತ್ತರ ಕೊಡಲು ಬಜರಂಗದಳ ತಯಾರಿದೆ ಎಂದು ಇನ್ನೊಮ್ಮೆ ಸವಾಲನ್ನು ‌ಹಾಕುತಿದ್ದೆವೆ, ನೀವು ಕೆಣಕಿ ಪ್ರಾರಂಭ ಮಾಡಿದ್ದೀರಾ ಅದರ ಅಂತ್ಯವನ್ನು ಕಾರ್ಯಕರ್ತರು ಮೇ 10 ರ ಚುನಾವಣೆ ದಿನದಂದು ಮಾಡಲಿದ್ದಾರೆ ಎಂದರು.