ಬಣಕಲ್ :ರಾಜ್ಯ ವಿಧಾನಸಭಾ ಚುನಾವಣೆ ಸಮೀಪವಾಗ್ತಿದ್ದಂತೆ ಟಿಕೆಟ್ಗಾಗಿ ಎಲ್ಲೆಡೆ ಫೈಟ್ ನಡೆಯುತ್ತಿದೆ. ಇನ್ನು, ಮೀಸಲು ಕ್ಷೇತ್ರ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಕುಮಾರಸ್ವಾಮಿಗೆ ಟಿಕೆಟ್ ನೀಡದಂತೆ ಬಣಕಲ್ ನ ಚೇಗು ಗ್ರಾಮಸ್ಥರು ಪಕ್ಷದ ಹೋಬಳಿ ಅಧ್ಯಕ್ಷರಾದ ಪುಟ್ಟಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹಾಲಿ ಬಿಜೆಪಿ ಶಾಸಕ ಕುಮಾರಸ್ವಾಮಿ ವಿರುದ್ಧ ಸ್ವ ಪಕ್ಷದವರೆ ಗರಂ ಆಗಿದ್ದು ಈ ಭಾರಿ ಶಾಸಕರಿಗೆ ಕ್ಷೇತ್ರದಿಂದ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ಹಾಲಿ ಶಾಸಕರ ವಿರುದ್ದ ಗ್ರಾಮಸ್ಥರು ಕಿಡಿಕಾಡಿದ್ದಾರೆ. ಶಾಸಕರು ಗ್ರಾಮದಲ್ಲಿ ಯಾವುದೇ ಕಾಮಗಾರಿ ಮಾಡಿಲ್ಲ ಪದೇ ಪದೇ ಸುಳ್ಳು ಭರವಸೆ ನೀಡಿ ಗ್ರಾಮಸ್ಥರಿಗೆ ಇವರ ಮೇಲೆ ಭರವಸೆಯೆ ಹೋಗಿದೆ ಮುಖಂಡರನ್ನ ಕಡೆಗಣಿಸಿ ಕ್ಷೇತ್ರದಲ್ಲಿ ಕಾರ್ಯಕರ್ತರು ಮುಖಂಡರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದ್ದಾರೆ. ಈ ಭಾರಿ ಟಿಕೆಟ್ ವ ನೀಡಿದ್ರೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ ಅಂತ ಸರ್ವೆ ವರದಿಗಳು ಬಂದಿದ್ದು ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಅಂತ ನಿವಾಸಿಗಳು ಮನವಿ ಮಾಡಿದ್ದಾರೆ.
