ಬಣಕಲ್ :ಲೋಕದಲ್ಲಿ ಅಧರ್ಮ, ಅನ್ಯಾಯ ತಾಂಡವಾಡುತ್ತಿದ್ದರೂ ತುಳುನಾಡಿನಲ್ಲಿ ದೈವಗಳು ತನ್ನ ಶಕ್ತಿ ಸಾಮರ್ಥ್ಯ ಮೆರೆಯುತ್ತಿರುತ್ತದೆ ಎಂಬ ನಂಬಿಕೆ ಇದೆ. ಇದು ಕೇವಲ ನಂಬಿಕೆ ಮಾತ್ರ ಅಲ್ಲ ಸತ್ಯ. ದೈವಗಳು ತಮ್ಮ ಕಾರಣಿಕವನ್ನು ಅನಾದಿ ಕಾಲದಿಂದಲೂ ನಿರಂತರವಾಗಿ ತೋರಿಸುತ್ತಲೇ ಬಂದಿದೆ. ದೈವ ಮುನಿದರೆ ಉಳಿಗಾಲವಿಲ್ಲ ಎಂಬ ಮಾತಿದೆ. ಈ ನಂಬಿಕೆಗೆ ಪುಷ್ಟಿ ನೀಡುವಂತೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ನಲ್ಲಿ ಘಟನೆಯೊಂದು ನಡೆದಿದೆ.
ಕೆಲ ದಿನಗಳ ಹಿಂದೆ ಬಣಕಲ್ ವಿಲೇಜ್ ನ ಬಿ.ಬಿ.ಲಕ್ಷ್ಮಣ ಎಂಬುವವರ ಮನೆಯಲ್ಲಿ ಚಿನ್ನದ ಸರ, ಕಳ್ಳತನವಾಗಿತ್ತು. ಮೊದಲ ಬಾರಿ ಚಿನ್ನದ ಸರ ಕಳ್ಳತನವಾದಾಗ ಯಾರು ಕೂಡ ಪೊಲೀಸರಿಗೆ ದೂರು ನೀಡಿರಲಿಲ್ಲ . 2ನೇ ಬಾರಿ ಕಳ್ಳತನವಾದಾಗ ಪೊಲೀಸರಿಗೆ ದೂರು ನೀಡಿದ್ದರು .ಕಳ್ಳತನವಾದ 2ದಿನದ ನಂತರ ಬಣಕಲ್ ಮಹಮ್ಮಾಯಿ ದೇವಸ್ಥಾನದಲ್ಲಿ ಗುಳಿಗ ದೈವದ ಕೋಲಾ ನಡಿದಿತ್ತು. ದಿಕ್ಕೇ ತೋಚದಂತಾಗಿದ್ದ ಕುಟುಂಬಸ್ಥರು ಗುಳಿಗ ದೈವದ ಮೊರೆ ಹೋಗಿ ದೈವದ ಮುಂದೆ ದೂರನ್ನು ಹೇಳಿಕೊಂಡಿದ್ದಾರೆ. ಕಷ್ಟಪಟ್ಟು ಸಂಪಾದನೆ ಮಾಡಿದ ಹಣದಲ್ಲಿ ಚಿನ್ನದ ಸರವನ್ನು ಖರೀದಿ ಮಾಡಿದ್ದೆವು. ನಮಗೆ ಆದ ನಷ್ಟವನ್ನು ನೀನೇ ತುಂಬಿಕೊಡಬೇಕು ಎಂದು ಗುಳಿಗ ದೈವದಲ್ಲಿ ಇಡೀ ಕುಟುಂಬ ಕೈಮುಗಿದು ಪ್ರಾರ್ಥನೆ ಮಾಡಿಕೊಂಡಿತ್ತು. ತಮ್ಮ ಮನದ ಇಂಗಿತವನ್ನು ಕುಟುಂಬ ದೈವದ ಮುಂದೆ ಹೇಳಿಕೊಂಡಿದ್ದರು. ಒಂದು ವಾರದಲ್ಲಿ ಕಳ್ಳತನವಾದ ವಸ್ತು ನಿಮಗೆ ದೊರಕಿಸಿ ಕೊಡುತ್ತೇನೆ ಎಂದು ದೈವ ಅವರಿಗೆ ಮಾತು ಕೊಟ್ಟಿತ್ತು. ಅದರಂತೆ
ಪ್ರಾರ್ಥನೆ ಮಾಡಿ ಎರಡೇ ದಿನಕ್ಕೆ ಚಿನ್ನದ ಸರ ಕಳವು ಆರೋಪಿ ಪೋಲೀಸರ ಬಲೆಗೆ ಬಿದ್ದಿದ್ದಾನೆ. ದೈವದ ಪವಾಡಕ್ಕೆ ಜನ ಹಾಗೂ ಕುಟುಂಬ ಅಚ್ಚರಿ ಖುಷಿ ವ್ಯಕ್ತಪಡಿಸಿದೆ. ಈ ಭಾಗದ ಜನರು ಯಾವುದೇ ಸಮಸ್ಯೆ ಬಂದರೂ ದೈವಗಳ ಮೊರೆ ಹೋಗ್ತಾರೆ ತುಳುನಾಡ ದೈವಸ್ಥಾನಗಳು ಕಾರಣಿಕ ಶಕ್ತಿಯನ್ನು ಹೊಂದಿದೆ ಎನ್ನುವುದು ಎಲ್ಲರಿಗೂ ತಿಳಿದಿರೋ ವಿಚಾರ. ಇಂತಹ ದೈವಸ್ಥಾನದ ಮುಂದೆ ಕಣ್ಣೀರಿಟ್ಟರೆ ದೈವಶಕ್ತಿ ಯಾರನ್ನೂ ಕೈ ಬಿಡೋದಿಲ್ಲ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ವರದಿ :ಸೂರಿ ಬಣಕಲ್
