ದುಂಡುಗ ಸರಕಾರಿ ಶಾಲೆ ಆವರಣದಲ್ಲಿ ಕುಡಿಯುವ ನೀರಿನ ಸ್ವಚ್ಛತೆ ನಡೆಸಿದ ಶೌರ್ಯ ವಿಪತ್ತು ನಿರ್ವಹಣಾ ವಲಯದ ಸ್ವಯಂಸೇವಕರು

ಕಳೆದ ಎರಡು ವರ್ಷಗಳಿಂದ ಶಾಲೆಯನ್ನು ಮುಚ್ಚಿರುವುದರಿಂದ ಶಾಲೆಯ ಮಕ್ಕಳು ಬಳಸಬೇಕಾದ ನೀರಿನ ಟ್ಯಾಂಕ್ ಕೊಳೆಯಿಂದ ತುಂಬಿದ್ದು ಅದನ್ನು ಶಾಲೆಯ ಮುಖ್ಯೋಪಾಧ್ಯಾಯರ ಮನವಿಗೆ ಸ್ಪಂದಿಸಿ ಕಸಬ ವಲಯದ ಸ್ವಯಂ ನೇವಕರು ಸ್ವಚ್ಛಗೊಳಿಸಿದರು.

ನೀರಿನ ಟ್ಯಾಂಕಿನ ಒಳಭಾಗ ಹಾಗೂ ಹೊರಭಾಗದಲ್ಲಿ ಸ್ವಚ್ಛತೆ ಗೊಳಿಸಿ ಟ್ಯಾಂಕ್ ಸುತ್ತ ಬೆಳೆದಿದ್ದ ಗಿಡಗಳನ್ನು ತೆರವುಗೊಳಿಸಲಾಯಿತು ಟ್ಯಾಂಕ್ ಸ್ವಚ್ಛಗೊಳಿಸಲು ನೀರಿಲ್ಲದ ಕಾರಣ ಸುಮಾರು ಅರ್ಧ ಕಿಲೋಮೀಟರ್ ನಷ್ಟು ನಡೆದು ನೀರನ್ನು ತಂದು ಸ್ವಚ್ಛಗೊಳಿಸಿದರು

ಈ ಸಂದರ್ಭದಲ್ಲಿ ಸಂಯೋಜಕರಾದ ಪ್ರವೀಣ್ ಪೂಜಾರಿ ಶಶಿ ಕೆಲ್ಲೂರು ಹರೀಶ್ ಗೌಡ ಮಂಜುನಾಥ್ ಪೆಟ್ರೋಲ್ ಬಂಕ್ ಅಶ್ವಿನ್ ಮಾಕೋನಹಳ್ಳಿ ಉಮೇಶ್ ಲೋಕವಳ್ಳಿ ,ಶಾಲೆ ಮುಖ್ಯ ಶಿಕ್ಷಕರಾದ ಸುಜಾತ ಸಿಬ್ಬಂದಿ ವರ್ಗದವರಾದ ದಾಕ್ಷಾಯಿಣಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸುಜಾತಾರವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ನೀರಿನ ಟ್ಯಾಂಕ್ ಸ್ವಚ್ಛತೆ ಆಗದಿರುವುದು ಮನಗಂಡು ಕಳೆದ ಒಂದು ತಿಂಗಳ ಹಿಂದೆ ಶಾಲೆ ಆವರಣವನ್ನು ಸ್ವಚ್ಛ ಮಾಡಿದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಹಾಗೂ ಈ ದಿನ ನೀರಿನಟ್ಯಾಂಕ್ ಸ್ವಚ್ಛತೆ ಗೊಳಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.