ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದಾಗ ಕೆರೆಯಂತೆ ಕಾಣುತ್ತದೆ ಬಣಕಲ್ ಕೆ ಎಂ ರಸ್ತೆ

ಮಳೆ ಬಂತೆಂದರೆ ಸಾಕು ಬಣಕಲ್ ಕೆಎಂ ರಸ್ತೆಯಲ್ಲಿ ಸಾಗುವುದೇ ದುಸ್ಸಾಹಸದ ಕೆಲಸ ಯಾಕೆಂದರೆ ಕೆಲವು ತಿಂಗಳ ಹಿಂದೆ ಹೆದ್ದಾರಿ ಕಾಮಗಾರಿ ಪ್ರಾರಂಭಗೊಂಡಿತ್ತು ಆದರೆ ಮಳೆ ಪ್ರಾರಂಭಗೊಂಡಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದರು ಬದ್ರಿಯಾ ಹೋಟೆಲ್ ಸಮೀಪವಿರುವ ಚರಂಡಿ ಮಣ್ಣಿನಿಂದ ಮುಚ್ಚಲ್ಪಟ್ಟಿದ್ದು ಮಳೆ ಬಂದಾಗ ನೀರು ಹೋಗಲು ಹೋಗಲು ಸಾಧ್ಯವಾಗದೆ ರಸ್ತೆಯೆಲ್ಲ ಕೆರೆಯಂತೆ ಪರಿವರ್ತನೆ ಆಗಿದೆ, ಅಧಿಕ ಮಳೆಯಾದಾಗ ರಸ್ತೆ ತುಂಬೆಲ್ಲ ನೀರು ನಿಂತು ಅಕ್ಕ ಪಕ್ಕದ ಅಂಗಡಿ ಹೋಟೆಲ್ ನೊಳಗೆ ನೀರು ಹೋದ ಉದಾಹರಣೆ ಇದೆ ಸಣ್ಣ ಮಳೆಯಾದರೂ ಸಾಕು ರಸ್ತೆ ತುಂಬೆಲ್ಲ ನೀರು ನಿಂತು ನಡೆದುಕೊಂಡು ಹೋಗಲು ಪರದಾಡಬೇಕಾಗಿದೆ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೂ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಷ್ಟೋ ಸಮಯದಲ್ಲಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ವಾಹನಗಳು ಹೋಗುವ ಬರದಲ್ಲಿ ಧರಿಸಿರುವ ಬಟ್ಟೆ ಕೆಸರು ಮಯವಾದ ಉದಾಹರಣೆ ಬಹಳಷ್ಟಿದೆ ಅಕ್ಕ ಪಕ್ಕದಲ್ಲಿ ಇರುವ ಅಂಗಡಿ ಮಾಲೀಕರು ಇದರಿಂದ ತೊಂದರೆ ಪಡುತಿದ್ದಾರೆ ದಯವಿಟ್ಟು ಸಂಬಂದ ಪಟ್ಟ ಜನಪ್ರತಿನಿದಿನಗಳು ಇತ್ತ ಗಮನಹರಿಸಿ ತಾತ್ಕಾಲಿಕವಾಗಿ ನೀರು ಹರಿದು ಹೋಗುವ ಹಾಗೆ ವ್ಯವಸ್ಥೆ ಮಾಡಿಕೊಟ್ಟರೆ ಎಲ್ಲರಿಗೂ ಸಹಕಾರಿಯಾಗುತ್ತದೆ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.