ಬಣಕಲ್ :ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆ ಮತ್ತು ಸತತ ಬೆಲೆ ಏರಿಕೆ ವಿರುದ್ಧ ರೈತ ಸಂಘಟನೆಗಳು ಇಂದು ದೇಶದಾದ್ಯಂತ ಭಾರತ್ ಬಂದ್ ಘೋಷಿಸಿದೆ. ಕರ್ನಾಟಕದಲ್ಲೂ ಅನೇಕ ರೈತ ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿದ್ದವು. ಹೀಗಾಗಿ ಇಂದು ಬಂದ್ ಯಶಸ್ವಿಯಾಗಲಿದೆ. ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧವಾಗಲಿದೆ ಎನ್ನಲಾಗಿತ್ತು.ಆದರೆ, ಜಿಲ್ಲೆಯ ಕೆಲವು ಕಡೆಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದನ್ನು ಬಿಟ್ಟರೆ ಹಲವು ಕಡೆಗಳಲ್ಲಿ ಎಂದಿನಂತೆ ಸಾಮಾನ್ಯವಾಗಿತ್ತು ಇಂದು ,ಬಣಕಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಬಸ್ ಸಂಚಾರ ಮುಕ್ತವಾಗಿತ್ತು. ಬಣಕಲ್ ನಲ್ಲಿ ಅಂಗಡಿ ಮುಂಗಟ್ಟು ಸಂತೆ ವ್ಯಾಪಾರ ಆಟೋ ಸೇರಿದಂತೆ ಎಲ್ಲಾ ಸಾರಿಗೆ ಸಂಚಾರವೂ ಯಾವುದೇ ಅಡ್ಡಿ-ಆತಂಕ ಇಲ್ಲದೆ ನಡೆದಿದೆ . ಜನ ಜೀವನವೂ ಎಂದಿನಂತೆ ಮಾಮೂಲಿ ಯಾಗಿದ್ದು, ಭಾರತ್ ಬಂದ್ಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ.
