ಎಲೆಮರೆ ಕಾಯಿಯಂತಿರುವ ಬಾಳೆಹೊಳೆ ಭಾಸ್ಕರ್ ರಂತಹ ಸಮಾಜ ಸೇವಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಲಿ


ತಾವು ಬುದ್ಧಿಜೀವಿಗಳು, ತಾವು ಸಮಾಜಸೇವಕರು ಎಂದು ತಮ್ಮನ್ನೇ ತಾವು ಬಿಂಬಿಸಿಕೊಳ್ಳುವ ಡೋಂಗಿ ವ್ಯಕ್ತಿಗಳ ನಡುವೆ ಯಾವುದೇ ಪ್ರಚಾರ, ಪ್ರಶಸ್ತಿಗಳಿಗೆ ಹಪಾಹಪಿಸದೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡು ಸಮಾಜಕ್ಕೆ ನಿಜವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸುವುದು ಮತ್ತು ಅಭಿನಂದಿಸುವುದು ನಿಜಕ್ಕೂ ಅಭಿನಂದನಾರ್ಹ ಕೆಲಸ.ಅದನ್ನು ಚುನಾಹಿತರಾದ ಜನಪ್ರತಿನಿದಿನಗಳು ಮಾಡಬೇಕಿದೆ, ಇದಕ್ಕೆ ತಾಜಾ ಉದಾಹರಣೆಯಂತಿರುವ ವ್ಯಕ್ತಿ ಬಾಳೆಹೊಳೆಯ ತಲಗೋಡು ನಿವಾಸಿಯಾಗಿರುವ ಭಾಸ್ಕರ್, ಹಲವಾರು ವರ್ಷಗಳಿಂದ ಬಾಳೆಹೊಳೆ ತಲಗೋಡಿನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಚಿರಪರಿಚಿತ ಹೆಸರು ಎಂದರೆ ಅದು ಭಾಸ್ಕರ್ ಅವರದ್ದು,ಬಾಳೆಹೊನ್ನೂರು ಸುತ್ತಮುತ್ತಲಿನ ನದಿ ಕೊಳ್ಳಗಳಲ್ಲಿ ಮುಳುಗಡೆಗೊಂಡ ಶವಗಳು ಪತ್ತೆಯಾದಲ್ಲಿ ಜನರ ಮನಸ್ಸಿನಲ್ಲಿ ಮೊದಲು ಹೊಳೆಯುವ ಹೆಸರೇ ಭಾಸ್ಕರ್ ಅವರದ್ದು, ತನ್ನ ಜೀವದ ಹಂಗು ತೊರೆದು ಹಿಂದು ಮುಂದು ನೋಡದೆ ಎಷ್ಟೇ ಕಷ್ಟ ಆದರೂ ನದಿಗಳಿಗೆ ಹಾರಿ ಶವಗಳನ್ನು ಹೊರ ತರುವಲ್ಲಿ ನೀಸ್ಸಿಮ,ಕಡು ಬಡತನದಲ್ಲಿ ಬದುಕು ಸಾಗಿಸುತ್ತಿರುವ ಅವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ ಇವರಿಗೆ 3ಜನ ಹೆಣ್ಣುಮಕ್ಕಳು ಇವರು ವಾಸ ಮಾಡುವ ಮನೆಯ ಚಿತ್ರಣ ನೋಡಿದರೆ ನಿಜಕ್ಕೂ ಮನಸ್ಸಿಗೆ ವೇದನೆಯಗುತ್ತದೆ ಇವರು ಇದುವರೆಗೂ ಬಾಳೆಹೊನ್ನೂರು ಸುತ್ತಮುತ್ತ 80ರಿಂದ 90 ಶವಗಳನ್ನು ನೀರಿನಿಂದ ಮೇಲೇತ್ತಿದ ಇತಿಹಾಸ ಇದೆ ಇಷ್ಟೆಲ್ಲಾ ಸಮಾಜ ಸೇವೆ ಮಾಡಿರುವ ಇವರ ಮನೆಯ ಪರಿಸ್ಥಿತಿ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ ನೋವುಂಟು ಮಾಡುತ್ತದೆ ಆದರೂ ಸಹ ತಮ್ಮ ಮನೆಯ ಪರಿಸ್ಥಿತಿ ತನ್ನ ಕುಟುಂಬದ ಕಷ್ಟವನ್ನು ಲೆಕ್ಕಿಸದೆ ಇನ್ನೊಬ್ಬರ ಕುಟುಂಬದ ಕಷ್ಟ ಪರಿಸ್ಥಿತಿಯಲ್ಲಿ ನೋವಿನ ಸಂದರ್ಭದಲ್ಲಿ ಯಾವುದೇ ಆಸೆಯನ್ನು ಹಾಗೂ ಷರತ್ತುಗಳನ್ನು ಹೇಳದೆ ಸಹಾಯ ಮಾಡಬೇಕೆಂಬ ಇವರ ಮನಸ್ಥಿತಿ ನಿಜಕ್ಕೂ ಮೆಚ್ಚುವಂತದ್ದು ಇವರಿಗೆ ನೀರಿನಲ್ಲಿ ಮುಳುಗಿ ಈಜಲು ಸರಿಯಾದ ಯಾವುದೇ ಒಂದು ಸುರಕ್ಷತಾ ಮುಂಜಾಗ್ರತಾ ಸಲಕರಣೆ ಇಲ್ಲದಿರುವುದು ಇವರ ದೌರ್ಬಾಗ್ಯ ಸರ್ಕಾರ ಇಂತಹವರನ್ನು ಗುರುತಿಸಿ ಜೀವನಕ್ಕೆ ಒಂದು ನೆಲೆ ಮಾಡಿಕೊಡಬೇಕೆಂದು ಬಾಳೆ ಹೊಳೆ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಆಗ್ರಹ. ಅಂದಿನ ಕೆಲಸ ಮಾಡಿದರೆ ಮಾತ್ರ ಅಂದಿನ ಒಪ್ಪತ್ತಿನ ಊಟಕ್ಕೆ, 3ಜನ ಹೆಣ್ಣುಮಕ್ಕಳನ್ನು ಹೊಂದಿರುವ ಇವರ ಕುಟುಂಬ ನಿರ್ವಣೆಗೆ ಸರ್ಕಾರ ಗಮನ ಕೊಡಬೇಕೆಂಬುದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ