ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುವೆಂಪುನಗರ ನಿವಾಸಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಗೀತಾ ಅವರಿಗೆ ಬಣಕಲ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಚಿಕಿತ್ಸಾ ಸಹಾಯ ಧನವನ್ನು ನೀಡಲಾಯಿತು, ಹಲವು ವರ್ಷಗಳಿಂದ ನೊಂದವರಿಗೆ ನೆರವು ನೀಡುತ್ತಾ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವ ಫ್ರೆಂಡ್ಸ್ ಕ್ಲಬ್ ಇಂದು ಗೀತಾರವರಿಗೆ ಸಣ್ಣ ಪ್ರಮಾಣದ ನೆರವು ನೀಡಿದೆ
ಗೀತಾ ಅವರು ಕಳೆದ ಕೆಲವು ಸಮಯಗಳಿಂದ ಮಾರಕ ಕ್ಯಾನ್ಸರ್ ರೋಗದೊಂದಿಗೆ ಹೋರಾಡುತ್ತಿದ್ದು, ಅವರ ಚಿಕಿತ್ಸೆಗಾಗಿ ಕೈಯಲ್ಲಿದ್ದ ಹಣವನ್ನೆಲ್ಲ ವ್ಯಯಿಸಿದ್ದಾರೆ,
ಗೀತಾ ಅವರ ಶಸ್ತ್ರ ಚಿಕಿತ್ಸೆ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆ ಯಲ್ಲಿ ಮಾಡಲಾಗಿದೆ, ಮುಂದಿನ ಚಿಕಿತ್ಸೆಗೆ ಅವರಿಗೆ ಹಣದ ಅವಶ್ಯಕತೆ ಬೇಕಾಗಿದೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ತೆಗೆದುಕೊಂಡರೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವರೆಂಬ ವೈದ್ಯರ ಭರವಸೆಯ ಹಿನ್ನೆಲೆಯಲ್ಲಿ ಮುಂದಿನ ಚಿಕಿತ್ಸೆ ಮಾಡಲು ಹಣದ ಅವಶ್ಯಕತೆ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು . ಇದಕ್ಕೆ ಧನಾತ್ಮಕ ಪ್ರತಿಕ್ರಿಯೆ ಲಭಿಸಿದ್ದು, ಅಲ್ಪ ಕಾಲಾವಧಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮೊತ್ತ ಸಂಗ್ರಹವಾಗಿದೆ.
ಗೀತಾ ಅವರ ಚಿಕಿತ್ಸೆಗಾಗಿ ಪ್ರತೀ ತಿಂಗಳು ಸುಮಾರು 20000 ರೂ. ಬೇಕಾಗಿದೆ ದೈನಂದಿನ ವೆಚ್ಚಗಳಿಗೂ ಪರದಾಡುತ್ತಿರುವ ಕುಟುಂಬಕ್ಕೆ ಉದಾರ ಮನಸ್ಕರ ಸಹಾಯ ಅತ್ಯಗತ್ಯವಾಗಿದೆ. ಕ್ಯಾನ್ಸರ್ ಪೀಡಿತೆ ಗೀತಾ ಅವರಿಗೆ ಹೆಚ್ಚಿನ ಚಿಕಿತ್ಸೆ ತುರ್ತು ಅಗತ್ಯವಿದ್ದು, ಸಹೃದಯರ ಉದಾರ ಧನ ಸಹಾಯ ಅನಿವಾರ್ಯವಾಗಿದೆ. ನಮ್ಮ ಸಹಾಯದಿಂದ ಒಂದು ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿ ತರಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ಪುಣ್ಯ ಕಾರ್ಯ ಬೇರೆ ಇರಲಾರದು.