ಓಟಿಗೆ ಮಾತ್ರ ಹಿಂದುತ್ವ ಅಸ್ತ್ರವನ್ನು ಬಳಸುವ ಸರ್ಕಾರ . ಹಿಂದೂಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಅಸಹ್ಯ ಪಡುವಂತಿದೆ ಸರ್ಕಾರ ಹಿಂದೂಗಳ ದೇವಸ್ಥಾನಗಳನ್ನು ಮಾತ್ರ ಕೇಡವುವ ಕೆಲಸ ಮಾಡುತ್ತಿದೆ ಇದು ಹೆಚ್ಚು ದಿನ ನಡೆಯೋಲ್ಲ ದೇವಾಲಯ ತೆರವು ಕಾರ್ಯಗಳನ್ನು ನಿಲ್ಲಿಸಿ ದ್ವಂಸ ಮಾಡಿದ ದೇವಾಲಯಗಳನ್ನು ಪುನಃ ನಿರ್ಮಾಣಕ್ಕೆ ಶೀಘ್ರ ಆದೇಶ ಹೊರಡಿಸಬೇಕು ಇಲ್ಲವಾದಲ್ಲಿ 1992ರ ಇತಿಹಾಸವನ್ನು ಮತ್ತೆ ಮರುಕಳಿಸಬೇಕಾಗುತ್ತದೆ ಎಂದು ಚಿಕ್ಕಮಗಳೂರು ಭಜರಂಗದಳ ಜಿಲ್ಲಾ ಸಂಚಾಲಕ ಶಶಾಂಕ್ ಗೌಡ ಹೇರೂರು ಎಚ್ಚರಿಕೆ ನೀಡಿದರು.
ಸರ್ಕಾರದ ಗಮನಕ್ಕೆ ತರದೆ ಮುಖ್ಯ ಕಾರ್ಯದರ್ಶಿಗಳು ದೇವಸ್ಥಾನ ತೆರವುಗೊಳಿಸುವ ಕುರಿತು ಪತ್ರ ಬರೆಯಲು ಸಾಧ್ಯವಿಲ್ಲ. ಇಡೀ ಪ್ರಕರಣದಲ್ಲಿ ಸರ್ಕಾರ ನಾಟಕವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹೆದ್ದಾರಿಯಲ್ಲಿದ್ದ ಚೋಳರ ಕಾಲದ ದೇವಾಲಯ ಎಂದೇ ಪ್ರಸಿದ್ಧಿಯಾಗಿದ್ದ, ಸುತ್ತ ಮುತ್ತಲಿನ ಗ್ರಾಮಸ್ಥರ ಆರಾಧ್ಯ ದೇವರಾಗಿದ್ದ ಹುಲ್ಲಹಳ್ಳಿ ಹೋಬಳಿ ಹುಚ್ಚಗಣಿ ಮಹದೇವಮ್ಮ ದೇಗುಲವನ್ನ ಜಿಲ್ಲಾಡಳಿತ ರಾತ್ರೋ ರಾತ್ರಿ ನೆಲಸಮಮಾಡಿದೆ ಹಿಂದೂಗಳನ್ನು ನಿಮ್ಮಚೇಲಾಗಳು ಎಂದು ಭಾವಿಸಿದ್ದೀರಾ, ನೀವು ಏನು ಮಾಡಿದರು ಕೈ ಕಟ್ಟಿಕೊಂಡು ಕುರುವುದಿಲ್ಲ, ನಮ್ಮ ಭಾವನೆಗಳಿಗೆ ದಕ್ಕೆ ಬಂದರೆ ಅದು ಯಾರೇ ಆಗಿರಲಿ ಸುಮ್ಮನೇ ಕೂರುವ ಜಾಯಮಾನ ಹಿಂದುಗಳದ್ದಲ್ಲ ಎಂದರು ಹಿಂದೂ ಸಂಘಟನೆ ಜಾಗೃತರಾಗಬೇಕು
ಹಲ್ಲೆ ದೌರ್ಜನ್ಯದ ವಿರುದ್ಧ ಹಿಂದೂಗಳು ಹೋರಾಡಬೇಕು| ಹಿಂದೂ ಸಂಘಟನೆಗಳ ಜತೆ ಕೈಜೋಡಿಸಿ ಹಿಂದೂ ದೇವಸ್ಥಾನಗಳನ್ನು ಉಳಿಸುವ ಪ್ರಯತ್ನ ಆಗಬೇಕಿದೆ
ಹಿಂದೂಗಳ ದೇವಸ್ಥಾನದ ಮೇಲೆ ನಡೆಯುತ್ತಿರುವ ಇಂತಹ ಕೃತ್ಯವನ್ನು ಹಿಂದೂಗಳೆಲ್ಲರೂ ಸಂಘಟಿತರಾಗಿ ಹೋರಾಡಬೇಕೆಂದು ಕರೆ ನೀಡಿದರು ..
ಹಿಂದಿನಿಂದಲೂ ದೇಶದಲ್ಲಿ ಹಿಂದೂಗಳ ಭಾವನೆಗಳ ಮೇಲೆ ಆಕ್ರಮಣ ನಡೆಯುತ್ತಲೇ ಇವೆ ಇದನ್ನು ಕೊನೆಗಾಣಿಸಬೇಕು ಮುಂದೆ ಈ ರೀತಿಯ ಕೃತ್ಯ ಮರುಕಳಿಸಬಾರದು ಎಂದರು.
