ಗೃಹ ಸಚಿವರ ಭಾಷಣದ ವೇಳೆ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದ ಎಸ್ ಪಿ

ಚಿಕ್ಕಮಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಭಾಷಣದ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಕುಸಿದು ಬಿದ್ದ ಘಟನೆ ಕಡೂರು ತಾಲೂಕಿನ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದಿದೆ.

ಗೃಹ ಸಚಿವರ ಭಾಷಣದ ವೇಳೆ ವೇದಿಕೆಯ ಎಡ ಹಾಗೂ ಬಲ ಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಂತಿದ್ದರು.
ಈ ವೇಳೆ ಮೈಸೂರು ಅಶ್ವದಳದ ಸಿಬ್ಬಂದಿ ಮೈಲುದ್ದೀನ್ ತಲೆ ಸುತ್ತು ಬಂದು ಬಿದ್ದರು. ಇದನ್ನು ಗಮನಿಸಿದ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿಯನ್ನು ಎತ್ತುಕೊಂಡು ಬಂದು ತಮ್ಮ ಪಕ್ಕದಲ್ಲೇ ಕೂರಿಸಿದರು