ಕೊಟ್ಟಿಗೆಹಾರ- ಅತ್ತಿಗೆರೆ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆರೋಗ್ಯ ನಂದನ ಕಾರ್ಯಕ್ರಮ ಕ್ಕೆ ಆರ್. ಬಿ.ಎಸ್. ಕೆ. ತಂಡ

ಚಿಕ್ಕಮಗಳೂರು : ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ, ಏರುಪೇರು ಆದರೂ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.ರೋಗಗಳ ಬಗ್ಗೆ ಅರಿವು ಹೊಂದಿರಬೇಕು. ಉತ್ತಮ ಶಿಕ್ಷಣ ಪಡೆಯಲು ಆರೋಗ್ಯ ಚೆನ್ನಾಗಿಟ್ಟು ಕೊಂಡು ಬಿಸಿಯಾದ ಆಹಾರ, ಶುದ್ಧವಾದ ನೀರು ಕುಡಿಯಬೇಕು ಎಂದು ಆರ್ ಬಿ ಎಸ್ ಕೆ ತಂಡದ ಆರೋಗ್ಯ ವೈದ್ಯಾಧಿಕಾರಿ ಡಾ.ಇಮ್ರಾನ್ ಹೇಳಿದರು.
ಕೊಟ್ಟಿಗೆಹಾರ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ನಂದನ ಕಾರ್ಯಕ್ರಮದಲ್ಲಿ ಶಾಲೆ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿ ಮಾತನಾಡಿದ ಅವರು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಹವಾಮಾನ ವೈಪರೀತ್ಯದಿಂದಾಗಿ ಜ್ವರ, ಶೀತ, ಕೆಮ್ಮು, ಸಹಜವಾಗಿ ಬರುತ್ತದೆ ಅದರಿಂದ ಹೆದರಿಕೊಳ್ಳದೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ
ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರವಿಕಲ ಪೈ ಮಾತನಾಡಿ,
ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವಾಗ ಮಾಸ್ಕ್ ಕಡ್ಡಾಯವಾಗಿ ಹಾಕಿಸಿ, ಮಕ್ಕಳ ಆರೋಗ್ಯ ಬಗ್ಗೆ ಮುಂಜಾಗ್ರತವಾಗಿ ವಿಶೇಷ ಗಮನ ಹರಿಸಬೇಕು ಎಂದೂ ಮಕ್ಕಳ ಪೋಷಕರಿಗೆ ಹೇಳಿದರು. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಕುಟುಂಬದ ಒಂದು ಪರಿಸ್ಥಿತಿ ಸೋಚನೀಯ ಆಗಬಹುದು ಆದ್ದರಿಂದ ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಬೇಕು ಎಂದರು.
ಶಾಖೆಯ ಶಿಕ್ಷಕರಾದ ಕುಮಾರ್ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ಇಮ್ರಾನ್ ವೈದ್ಯಾಧಿಕಾರಿಗಳು , ಡಾ. ಮೇಘನ, ವೈದ್ಯಾಧಿಕಾರಿಗಳು ಡಾ. ಮಲ್ಲಿಕಾರ್ಜುನ ವೈದ್ಯಾಧಿಕಾರಿಗಳು, ಡಾ ರಾಹುಲ್‌ ಪ್ರಭು, ಕಣ್ಣಿನ ತಜ್ಞ ವೈದ್ಯಾಧಿಕಾರಿಗಳು ಪೃಥ್ವಿ ಪಿ, ಪೂರ್ಣಿಮ ಹೆಚ್ ಸಿ ಶುಶ್ರೂಶಕಿ, ಬಬಿತ CHO, ಮಂಜುಳಾ PHCO, ಕುಮುದ PHCO.
ಮಕ್ಕಳ ಪೋಷಕರು, ಆಶಾಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು,ಪೋಷಕರು, ಮುಂತಾದವರು ಇದ್ದರು.