ಕಾಡಾನೆ ದಾಳಿಗೆ ನಾಲ್ವರಿಗೆ ಸಂಪೂರ್ಣ ಗಾಯ ಓಮಿನಿ ವ್ಯಾನ್ ಪಲ್ಟಿ ಮಾಡಿದ ಒಂಟಿ ಸಲಗ

ಓಮಿನಿ ಕಾರನ್ನು ಪಲ್ಟೀ ಮಾಡಿ ಪುಡಿ ಮಾಡಿದ ಕಾಡಾನೆ : ನಾಲ್ವರಿಗೆ ಗಂಭೀರ ಗಾಯ

ಕಾಡಾನೆಯೊಂದು ಓಮಿನಿ ಕಾರನ್ನು ಪಲ್ಟೀ ಮಾಡಿ, ಪುಡಿ ಮಾಡಿದ ಪರಿಣಾಮ, ನಾಲ್ವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಕುಂದೂರು – ಸಾರಗೋಡು ರಸ್ತೆಯಲ್ಲಿ ಕಾಡಾನೆ ದಾಳಿ ನಡೆಸಿದ್ದು, ಓಮಿನಿ ವಾಹನವನ್ನು ಎಳೆದಾಡಿ ಒಂಟಿ ಸಲಗವು ಪುಡಿ ಮಾಡಿದೆ.

ಗಾಯಗೊಂಡವರು ಚಿಕ್ಕಮಗಳೂರಿನ ಮೂಲದವರು ಎಂದು ತಿಳಿದು ಬಂದಿದೆ. ಶೃಂಗೇರಿ- ಹೊರನಾಡು ದೇವಸ್ಥಾನಕ್ಕೆ ಹೋಗುತ್ತಿದ್ದ ಸಂಧರ್ಭದಲ್ಲಿ ಈ ಘಟನೆ ನಡೆದಿದೆ.

ವಾಹನದಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು,ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರ್ ವ್ಯಾಪ್ತಿಗೆ ಸೇರಿದ ಕುಂದೂರು – ಸಾರಗೋಡಿನಲ್ಲಿ ನಡೆದ ಘಟನೆ.