ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಟೀ ಪ್ರದೇಶವೆಂದು ಘೋಷಿಸಿ ಎಂದು ಮೂಡಿಗೆರೆ ಶಾಸಕರ ಏಕಾಂಗಿ ಧರಣಿ

2021 ನೇ ಸಾಲಿನ ಅತಿವೃಷ್ಟಿ, ಪ್ರವಾಹ ಪೀಡಿತ ತಾಲೂಕುಗಳನ್ನು ಘೋಷಿಸಲಾಗಿದ್ದು, ಕರ್ನಾಟಕದ 13 ಜಿಲ್ಲೆಗಳ 61 ತಾಲ್ಲೂಕುಗಳು ಸೇರ್ಪಡೆಗೊಂಡಿವೆ.ಇದರಲ್ಲಿ ಮಳೆನಾಡು ಎಂದೇ ಖ್ಯಾತಿ ಹೊಂದಿರುವ ಮೂಡಿಗೆರೆ ತಾಲೂಕು ಸೇರ್ಪಡೆ ಆಗದೇ ಇರುವದನ್ನು ಖಂಡಿಸಿ ಮೂಡಗೆರೆ ಕ್ಷೇತ್ರದ ಶಾಸಕರಾದ ಕುಮಾರಸ್ವಾಮಿ ಅವರು ಇಂದು ವಿಧಾನ ಸೌಧದ ಎದುರು ಧರಣಿ ಕೂತಿದ್ದಾರೆ.ಹಾಗೂ ಆಡಳಿತರೂಡ ಶಾಸಕರು ತನ್ನದೇ ಸರ್ಕಾರದ ವಿರುದ್ಧ ಈ ರೀತಿ ಧರಣಿ ನೆಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಒಳಪಟ್ಟಿದ್ದಾರೆ