ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ವಾಹನ ಗಳಲ್ಲಿ ಬಣಕಲ್ ನಲ್ಲಿ ಪಥ ಸಂಚಲನ

ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೋಮು ಸೌಹಾರ್ದತೆ ಕಾಪಾಡುವ ಮತ್ತು ಭದ್ರತೆ ದೃಷ್ಟಿಯಿಂದ ಬಣಕಲ್ ಪೊಲೀಸ್ ಠಾಣೆಯ ಪಿ ಎಸ್ ಐ ರೇಣುಕಾ ರವರ ನೇತೃತ್ವದಲ್ಲಿ ಬುಧವಾರ ಸಂಜೆ ಪಥ ಸಂಚಲನ ನಡೆಸಲಾಯಿತು.

ಬಣಕಲ್ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡ ಪಥ ಸಂಚಲನ ಬಣಕಲ್ ಮುಖ್ಯರಸ್ತೆಯಿಂದ ಸಾಗಿ ಸಂತೆರಸ್ತೆ ಚರ್ಚ್ ರಸ್ತೆ ಮೂಲಕ ಸಾಗಿ ಠಾಣೆಯಲ್ಲಿ ಮುಕ್ತಾಯಗೊಳಿಸಲಾಯಿತು.

ಈ ಸಂದರ್ಭದಲ್ಲಿ ಬಣಕಲ್ ಠಾಣಾ ಪಿ ಎಸ್ ಐ ರೇಣುಕಾ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.