ಕೊಟ್ಟಿಗೆಹಾರ: ಸಮೀಪದ ಬಾಳೂರಿನ ಚರ್ಚಿನಲ್ಲಿ ಸಂತ ಅಂತೋಣಿ ಹಬ್ಬವನ್ನು ಶುಕ್ರವಾರ ಸಂಜೆ ಸಂಭ್ರಮದಿಂದ ಆಚರಿಸಲಾಯಿತು. ಸಂತ ಅಂತೋಣಿಯವರ ಹಬ್ಬದ ಪೂಜೆಯನ್ನು ಬಣಕಲ್ ಚರ್ಚಿನ ದರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಅರ್ಪಿಸಿ ಮಾತನಾಡಿ’ ಸಂತ ಅಂತೋಣಿಯವರು ಯೇಸುಕ್ರಿಸ್ತರ ನಂಬಿಕೆಯ ಶಕ್ತಿಯಾಗಿ ಭರವಸೆಯ ಕುರಿತು ಪ್ರತಿಪಾದಿಸಿದ ಸಂತರಾಗಿದ್ದು ಪವಾಡ ಪುರುಷರಾಗಿಯೂ ಗುರುತಿಸಿಕೊಂಡಿದ್ದಾರೆ.
ಭಕ್ತರು ಸಂತ ಅಂತೋಣಿಯವರಲ್ಲಿ ನಂಬಿಕೆ ಹೊಂದಿ ಪ್ರಾರ್ಥಿಸಿದರೆ ಅವು ಈಡೇರುತ್ತವೆ.ಜನರು ಜೀವನದಲ್ಲಿ ಶಾಶ್ವತದ ನಂಬಿಕೆ ಹೊಂದಬೇಕು.ಪ್ರಾರ್ಥನೆಯು ಯಾತ್ರಿಕರಾಗಿ ನಮ್ಮನ್ನು ಬಲ ಪಡಿಸುತ್ತದೆ. ಶಾಶ್ವತ ಆನಂದದ ಕಡೆಗೆ ಭರವಸೆಯೊಂದಿಗೆ ನಂಬಿಕೆಯೊಂದಿಗೆ ನಡೆಯಲು ಸಂತ ಅಂತೋಣಿಯವರು ನಮಗೆ ಮಾರ್ಗದರ್ಶಕರಾಗಿದ್ದಾರೆ. ಅವರ ಹಬ್ಬದಂದು ಕ್ರೈಸ್ತ ಭಕ್ತಾಧಿಗಳಾದ ನಾವು ಸನ್ಮಾರ್ಗದ ದಾರಿಯಲ್ಲಿ ನಡೆಯಬೇಕು. ಹಲವು ಕಡೆಗಳಲ್ಲಿ ಸಂತ ಅಂತೋಣಿ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ’ಎಂದರು.
ಸಂಭ್ರಮಿಕ ಪೂಜೆಯಲ್ಲಿ ದರ್ಮಗುರುಗಳಾದ ವಿಮುಕ್ತಿಯ ಫಾ.ಎಡ್ವಿನ್ ರಾಕೇಶ್ ಡಿಸೋಜ,ನಿಡಿಗಲ್ ಚರ್ಚಿನ ಗುರುಗಳಾದ ಫಾ.ಚಾರ್ಲ್ಸ್ ಸಲ್ಡಾನ,ಸಿಸ್ಟರ್ ಹಿಲ್ಡಾ ಲೋಬೊ ಭಾಗವಹಿಸಿದ್ದರು.ರೊನಾಲ್ಡ್ ರಿಜ್ವಾನ ಡಿಸೋಜ ಅವರ ಮುಖಂಡತ್ವದಲ್ಲಿ ಮನೆ ಮುಂದಿನ ಸಂತ ಅಂತೋಣಿ ಗವಿಯ ಮುಂದೆ ವಿಶೇಷ ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ರೊನಾಲ್ಡ್ ಡಿಸೋಜ, ರಿಜ್ವಾನ ರೇಗೊ, ರಿಯಾನ್ನ, ರಿನೋಲಾ, ಪ್ಲೇವಿಯಾ,ರೊಲ್ಪಿ ಡಿಸೋಜ,ರೊಲ್ವಿಯಾ,ಡೊಲ್ಪಿ ಡಿಸೋಜ,ಸಿಂತಿಯಾ ಪಾಯ್ಸ್,ಹೆರಾಲ್ಡ್ ಡಿಸೋಜ,ಲೂಸಿ ಡಿಸೋಜ,ಲ್ಯಾನ್ಸಿ ಕಾರ್ಲೊ,ರೀನಾ ರೇಗೊ ಹಾಗೂ ಕೆಳಗೂರು,ಹಿರೇಬೈಲ್. ಕೊಟ್ಟಿಗೆಹಾರ,ಜಾವಳಿ ಬಾಳೂರು,ಬಣಕಲ್ ನ ಕ್ರೈಸ್ತ ಭಕ್ತಾಧಿಗಳು ಇದ್ದರು.