- ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆದು ಚಾರಣಕ್ಕೆ ತೆರಳಿದ್ದ 11 ವಿದ್ಯಾರ್ಥಿಗಳು ಕತ್ತಲಾಗುತ್ತಿದ್ದಂತೆ ದಾರಿ ಕಾಣದೆ ಕಾಡಿನಲ್ಲೇ ಸಿಲುಕಿ ಕೊನೆಗೂ ಪತ್ತೆಯಾದ ಘಟನೆ ನಡೆದಿದೆ.
ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಟ್ರಕ್ಕಿಂಗ್ ಬಂದಿದ್ದರು.
ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಆರಂಭಿಸಿದ್ದು,ದಾರಿ ತಿಳಿಯದೆ ಕಾಡಲ್ಲಿ ಅತಂತ್ರವಾಗಿದ್ದರು ಅದರಲ್ಲಿ ಓರ್ವನಿಗೆ ನೆಟ್ವರ್ಕ್ ಸಿಕ್ಕಿದೆ ಅವನು ತನ್ನ ಸ್ನೇಹಿತರಿಗೆ ಕರೆಮಾಡಿ ಆರಿಫ್ ಅವರ ನಂಬರ್ ಪಡೆದು ಸಹಾಯಕ್ಕೆ ಮನವಿ ಮಾಡಿದ್ದರು.
ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಪೊಲೀಸರ ಜೊತೆ ಸಮಾಜ ಸೇವಕ ಆರೀಫ್, ಅರಣ್ಯ ಸಿಬ್ಬಂದಿ ಮಧ್ಯರಾತ್ರಿ 2 ಗಂಟೆವರೆಗೂ ಶೋಧಿಸಿದ್ದಾರೆ.ಕೊನೆಗೂ ಅವರನ್ನು ಪತ್ತೆ ಹಚ್ಚಿಕರೆತಂದಿದ್ದಾರೆ.
ಕಾಡಲ್ಲಿ ಸಿಕ್ಕ ಅವರನ್ನ ಸುರಕ್ಸಿತವಾಗಿ ಕರೆತಂದು ವಾಪಸ್ ಕಳುಹಿಸಿದ್ದಾರೆ
ಸಮಾಜ ಸೇವಕ ಆರಿಫ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪೋಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ ✍️ಸೂರಿ ಬಣಕಲ್