ಮತ್ತಿಕಟ್ಟೆ ಯುವಕ ಜೋಸೆಫ್ ಪಾರ್ಶ್ವವಾಯುನಿಂದ ಆಸ್ಪತ್ರೆ ದಾಖಲು ಚಿಕಿತ್ಸೆಗೆ ನೆರವಾಗಲು ಮನವಿ

ಬಣಕಲ್ :ಜೋಸೆಫ್ ಎಂಬ ವ್ಯಕ್ತಿ (35)ಪಾರ್ಶ್ವವಾಯು ನಿಂದ ದೇಹದ ಒಂದು ಭಾಗ ಸ್ವಾದಿನ ಕಳೆದುಕೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಮತ್ತಿಕಟ್ಟೆ ನಿವಾಸಿಯಾಗಿರುವ ಜೋಸೆಫ್ ಶಿವ ಎಂಬುವವರ ಪುತ್ರರಾಗಿದ್ದಾರೆ.

ಈ ವರ್ಷದ ಮಳೆಗಾಲದಲ್ಲಿ ಮನೆ ಕಳೆದುಕೊಂಡು ಗುಡ್ಡೆಟ್ಟಿಯಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೆ ವಾಸಿಸುತ್ತಿದ್ದರು. ಬೆಳಗ್ಗೆ ಕೆಲಸಕ್ಕೆ ಹೋಗಲು ಇನ್ನೂ ಯಾಕೆ ಬರಲಿಲ್ಲ ಎಂದು ಮಾಲೀಕರು ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು..
ಈಗ ಮಂಗಳೂರಿನ ಫಾದರ್ ಮುಲ್ಲಾರ್ ಆಸ್ಪತ್ರೆಯ ಐ ಸಿ ಯು ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಬಡ ಕುಟುಂಬದ ಹುಡುಗ ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈಗ ಇದ್ದಕ್ಕಿದ್ದಂತೆ ದೇಹದ ಸ್ವಾದಿನ ಕಳೆದುಕೊಂಡು ಆಸ್ಪತ್ರೆ ಪಾಲಾಗಿರುವುದು ನೋವಿನ ವಿಷಯ.
ಅವನ ಚಿಕಿತ್ಸೆಗೆ 2ಲಕ್ಷ ವೆಚ್ಚ ವಾಗಲಿದೆ ಹೃದಯವಂತ ದಾನಿಗಳ ನೆರವು ಬೇಕಾಗಿದೆ. ಬಾಳಿ ಬದುಕ ಬದುಕಬೇಕಾದ ಯುವಕ ವಯಸ್ಸಲ್ಲದ ವಯಸ್ಸಿನಲ್ಲಿ ಹಾಸಿಗೆ ಹಿಡಿದಿರುವುದು ನಿಜಕ್ಕೂ ಬೇಸರ ಮೂಡಿಸಿದೆ.
ಸಹಾಯ ಮಾಡಲು ಇಚ್ಚಿಸುವವರು ಈ ಕೆಳಕಂಡ ನಂಬರ್ ಗೆ ನೇರವಾಗಲು ಕೋರಿದ್ದಾರೆ.
ಅವರ ಸಹೋದರಿ ಜ್ಯೋತಿ ಜೋಸ್ಲಿನ್
ನಂಬರ್ 9535027480

ವರದಿ ✍️ಸೂರಿ ಬಣಕಲ್