41ವರ್ಷಗಳ ಸುದೀರ್ಘ ಸೇವೆ :ಅಂಚೆ ಸೇವೆಯಿಂದ ಹೆಗ್ಗುಡ್ಲು ಅಂಚೆ ಶಾಖೆಯ ನಾಗೇಶ್ ಗೌಡರು ನಿವೃತ್ತಿ

ಹೆಗ್ಗುಡ್ಲು ಅಂಚೆ ಇಲಾಖೆಯ ಶಾಖೆಯಲ್ಲಿ ನಲವತ್ತು ವರ್ಷಗಳ ಸುದೀರ್ಘ ಪಯಣ ನಡೆಸಿ ಮಾರ್ಚ್ 7ರಂದು ಸಾರ್ಥಕ ಸೇವೆಯಿಂದ ನಿವೃತ್ತಿಯಾದ ನಾಗೇಶ್ ಗೌಡರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಗ್ರಾಮೀಣ ಪ್ರದೇಶದ ಜನಸಾಮಾನ್ಯರ ಅಗತ್ಯದ ಸೇವೆಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ಸಫಲರಾಗಿದ್ದರು. ಅಂಚೆ ಇಲಾಖೆಯಲ್ಲಿನ ಪ್ರಾಮಾಣಿಕತೆಯ ಜೊತೆಗೆ ಶಿಸ್ತುಬದ್ಧತೆಯ ಕಚೇರಿ ನಿರ್ವಹಣೆ ಸಾರ್ವಜನಿಕರಿಗೆ ಕಾಲಕಾಲಕ್ಕೆ ಮಾಹಿತಿ ಸಲಹೆಗಳನ್ನು ನೀಡುತ್ತಾ ಹೆಗ್ಗುಡ್ಲು ಮತ್ತಿಕಟ್ಟೆ ಜನರ ಪ್ರೀತಿಗೆ ಪಾತ್ರರಾಗಿದ್ದರು.

ಅಂಚೆ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಶ್ ಗೌಡರು ಸುದೀರ್ಘ ಸೇವೆಯೊಂದಿಗೆ ನಿವೃತ್ತಿ ಗೊಂಡಿರುವುದರಿಂದ ಶುಕ್ರವಾರ ಬಣಕಲ್ ಅಂಚೆ ಕಚೇರಿ ಸಿಬ್ಬಂದಿ ವರ್ಗದವರಿಂದ ಬೀಳ್ಕೊಡುಗೆ ಕಾರ್ಯಕ್ರಮ ಮಾಡಿದರು.

ಈ ಸಂದರ್ಭದಲ್ಲಿ ಬಣಕಲ್ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಮಹೇಂದ್ರ ಮೌರ್ಯ ರವರುಮಾತನಾಡಿ
ತಮ್ಮ ಸುದೀರ್ಘ 41ವರ್ಷಗಳ ಸೇವೆಯಲ್ಲಿ ಯಾವುದೇ ಚ್ಯುತಿ ಬಾರದ ಹಾಗೆ ತಮ್ಮ ಸೇವೆಯನ್ನು ನಿರ್ವಹಿಸಿದ್ದಾರೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ತಮ್ಮ ವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಂಚೆ ಕಚೇರಿಯ ಸಿಬ್ಬಂದಿಗಳಾದ ಮಂಜುನಾಥ್ ಹೆಗ್ಗುಡ್ಲು, ರವಿಕುಮಾರ್ ಮಂಜುನಾಥ್ ಹೊಸಹಳ್ಳಿ, ನಿಶಾಂತ್ ಬಣಕಲ್, ದೇವರಾಜ್ ಗೀತಾ ಕೆಂಜಿಗೆ, ಪಾವನ ಬಿ.ಹೊಸಹಳ್ಳಿ
ಇದ್ದರು.


ವರದಿ: ✍️ಸೂರಿ ಬಣಕಲ್