ಬಣಕಲ್ :ಮೂಡಿಗೆರೆ ತಾಲ್ಲೂಕು ಬಾಳೂರು ಹೊರಟ್ಟಿಯ ಅಡಿಗೆ ಮಲ್ಲೇಶ್ ಅವರ ಹಿರಿಯ ಪುತ್ರ ಲಿತಿನ್ ಬಿ.ಎಮ್. ಸರ್ಕಾರಿ ಹುದ್ದೆಗೆ ಆಯ್ಕೆ ಆಗಿರುತ್ತಾರೆ.ಬಾಳೂರು ಹೊರಟ್ಟಿಯ ಅಡಿಗೆ ಮಲ್ಲೇಶ್ ಇವರ ಹಿರಿಯ ಪುತ್ರ ಲಿತಿನ್ ಬಿ ಎಮ್ ಇವರು ರಾಜ್ಯ ಕೆಇಎ ನಡೆಸಿದ ಸಹಾಯಕ ಪ್ರಾದ್ಯಪಕರ ಹುದ್ದೆಗೆ ರಾಜ್ಯದಲ್ಲಿ 8ನೇ ರಾಂಕ್ ಪಡೆದು ಸಹಾಯಕ ಪ್ರಾದ್ಯಪಕರ ಹುದ್ದೆಗೆ ಆಯ್ಕೆಯಾಗಿರುತ್ತಾರೆ. ಇವರು ಪ್ರಸ್ತುತ ಕಾರ್ಕಳದ ಹಿಡಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೆಯೇ ಇವರು ತಮ್ಮ ಪಿ ಎಚ್.ಡಿ ಪದವಿಯನ್ನು ಮಣಿಪಾಲ್ ನಲ್ಲಿ ಮುಗಿಸಿರುತ್ತಾರೆ ಹಾಗೆಯೇ ಇವರು ಎನ್ಇಟಿ ಮತ್ತು ಜೆ ರ್ ಎಫ್ ಅನ್ನು ಪೂರ್ಣಗೊಳಿಸಿರುತ್ತಾರೆ. ಇವರ ಸಾಧನೆಗೆ ಪೋಷಕರು ಹಾಗೂ ಬಾಳೂರು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ :✍️ಸೂರಿ ಬಣಕಲ್