ಬಣಕಲ್ ದೊಡ್ಡ ವಿಸ್ತಾರವಾದ ಹೋಬಳಿಯಾಗಿದ್ದು ಅನೇಕ ಗ್ರಾಮಗಳು ಈ ಹೋಬಳಿಯಡಿ ಬರುತ್ತದೆ ಬಣಕಲ್ ನಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದು ಬೆಳಗ್ಗೆಯಿಂದ ಸಂಜೆವರೆಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗುತ್ತಿವೆ, ಆದರೆ ಸಂಜೆ ಕಳೆದ ಮೇಲೆ ಆಸ್ಪತ್ರೆ ಸೇವೆಗಳು ಲಭ್ಯವಿಲ್ಲ ಹಾಗೂ ಅಂಬುಲೆನ್ಸ್ ಸೇವೆ ಸಹ ಈ ಆಸ್ಪತ್ರೆಯಲ್ಲಿ ಇರುವುದಿಲ್ಲ, ಬಣಕಲ್ ಬಾಳೂರು ಹೋಬಳಿಯಲ್ಲಿ ಹೆಚ್ಚು ಕಾಫಿ ತೋಟದಲ್ಲಿ ಕೆಲಸ ಮಾಡುವ ಬಡ ಕೂಲಿ ಕಾರ್ಮಿಕರು ಹಾಗೂ ಕೆಳವರ್ಗದ ಜನರು ವಾಸವಾಗಿದ್ದಾರೆ. ಚಾರ್ಮುಡಿ ಘಾಟ್ ಭಾಗದಲ್ಲಿ ಕೂಡ ಹೆಚ್ಚು ಅಪಘಾತಗಳು ಸಂಭವಿಸುತ್ತದೆ ಆಗ ಗಾಯಾಳುಗಳನ್ನು ರೋಗಿಗಳನ್ನು ಸಂಜೆ ಸಮಯದಲ್ಲಿ ದೂರದ ಮಂಗಳೂರು ಚಿಕ್ಕಮಗಳೂರು ಆಸ್ಪತ್ರೆಗಳಿಗೆ ತುರ್ತಾಗಿ ಸಾಗಿಸಬೇಕಾಗುತ್ತದೆ. ಮಂಗಳೂರಿಗೆ ಹೋಗಲು 120 ಕಿಮೀ ಹಾಗೂ ಚಿಕ್ಕಮಂಗಳೂರಿಗೆ ಹೋಗಲು 50ಕಿಮೀ ಇರುವುದರಿಂದ ತುರ್ತಾಗಿ ಒಂದು ಹೊಸ ಆಂಬುಲೆನ್ಸ್ ಸಹ ತಾವು ಒದಗಿಸಿಕೊಟ್ಟರೆ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗುತ್ತದೆ. ಇಲ್ಲಿಯೇ24×7 ಆಸ್ಪತ್ರೆ ಸೌಲಭ್ಯವಿದ್ದರೆ ರೋಗಿಗಳಿಗೆ ತುರ್ತು ಚಿಕಿತ್ಸೆಗೆ ಅನುಕೂಲವಾಗುತ್ತದೆ. ಹಾಗಾಗಿ ಬಣಕಲ್ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದರೆ ಬಣಕಲ್ ಸುತ್ತ ಮುತ್ತಲಿನ ಗ್ರಾಮಸ್ಥರಿಗೆ ಹಾಗೂ ಹಳ್ಳಿಗಾಡು ಜನರಿಗೆ ಅನುಕೂಲವಾಗುತ್ತದೆ.ಬಣಕಲ್ ಮಲೆನಾಡುಭಾಗವಾಗಿದ್ದರಿಂದ ಇಲ್ಲಿ ಅತೀ ಹೆಚ್ಚು ಮಳೆ ಹಾಗೂ ಗುಡ್ಡಗಾಡು ಪ್ರದೇಶ ಇರುವುದರಿಂದ ಆನೆಗಳ ಹಾವಳಿಕೂಡ ಇದೆ.ಈ ನಿಟ್ಟಿನಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ಬಣಕಲ್ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಜೊತೆಗೆ ಈ ಆಸ್ಪತ್ರೆಗೆ ಒಂದು ಆಂಬುಲೆನ್ಸ್ ಸೇವೆಯನ್ನು ತುರ್ತಾಗಿ ನೀಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.ತಮ್ಮ ವಿಶ್ವಾಸಿ ಹರ್ಷ ಮೇಲ್ವಿನ್ ಲಸ್ರಾದೋ ಅಲ್ಪ ಸಂಖ್ಯಾತರ ರಾಜ್ಯ ಉಪಾಧ್ಯಕ್ಷರು ಕೆ.ಪಿ.ಸಿ.ಸಿ.
ವರದಿ :✍️ಸೂರಿ ಬಣಕಲ್