ಬಣಕಲ್ :ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಸುಭಾಷ್ ನಗರ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ವಿಗ್ರಹವನ್ನು ಶುಕ್ರವಾರ ಅದ್ದೂರಿಯಾಗಿ ಮೆರವಣಿಗೆ ಮೂಲಕ ಬಣಕಲ್ ಹೇಮಾವತಿ ನದಿಯಲ್ಲಿ ವಿಸರ್ಜಿಸಲಾಯಿತು.ಸಂಜೆ 4ಗಂಟೆಗೆ ಗಣೇಶ ವಿಸರ್ಜನೆಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಡಿಜೆ ಸೌಂಡ್ ಸಿಸ್ಟಮ್, ಹುಲಿವೇಷ, ಮಕ್ಕಳ ಕುಣಿತ ಭಜನೆ ಮೂಲಕ ಸುಭಾಷ್ ನಗರದಿಂದ ಆರಂಭಗೊಂಡ ಮೆರವಣಿಗೆ ಬಣಕಲ್ ರಾಜಬೀದಿಗಳಲ್ಲಿ ಸಾಗಿತು.
ಮೆರವಣಿಗೆಯಲ್ಲಿ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ಡಿಜೆ ಹಾಡಿಗೆ ಹೆಜ್ಜೇ ಹಾಕಿರುವುದು ಗಮನ ಸೆಳೆಯಿತು. ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪುರುಷರು ಭಾಗವಹಿಸುವ ಮೂಲಕ ವಿವಿಧ ಗೀತೆಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು.ದಾರಿಯುದ್ಧಕ್ಕೂ ಕಿವಿಗಡಚಿಕ್ಕುವ ಧ್ವನಿ ವರ್ಧಕಗಳಿಂದ ಹೊರ ಹೊಮ್ಮುತ್ತಿದ್ದ ಹಾಡಿಗೆ ತಕ್ಕಂತೆ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಹೆಜ್ಜೆ ಹಾಕಿ ಸಂಭ್ರಮಿಸಿದರು. ಗಣೇಶ ನಾಮ ಸ್ಮರಣೆ, ಗಣೇಶನ ಜಯ ಘೋಷ ಹಾಕುತ್ತಾ ಕುಳಿದು ಕುಪ್ಪಳಿಸಿದರು ಜನವೋ ಜನ: ಗಣೇಶನಿಗೆ ವೈಭವದ ವಿದಾಯ ಹೇಳಲು ಮೆರವಣಿಗೆಯಲ್ಲಿ ಕುಳಿದು ಕುಪ್ಪಳಿಸುವ ಜನ ಒಂದೆಡೆಯಾದರೆ ಗಣೇಶ ವಿಸರ್ಜನೆಯ ಅವಿಸ್ಮರಣೀಯ ದೃಶ್ಯ ಕಣ್ತುಂಬಿಕೊಳ್ಳಲು ಅದಕ್ಕೂ ಹೆಚ್ಚು ಜನ ನೆರೆದಿದ್ದರು.
ಗಣೇಶ ಮೆರವಣಿಗೆ ನೋಡಲು ರಾತ್ರಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಮನೆ, ಅಂಗಡಿ ಸೇರಿದಂತೆ ಕಟ್ಟಡದ ತುತ್ತ ತುದಿಯಲ್ಲಿ ನಿಂತು ಜನರು ಗಣೇಶ ವಿಸರ್ಜನೆಯ ವೈಭವವನ್ನು ವೀಕ್ಷಿಸಿದರು ಪೋಲೀಸರ ಕಾರ್ಯಕ್ಕೆ ಮೆಚ್ಚುಗೆ: ಮೆರವಣಿಗೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಬಣಕಲ್ ಪಿ.ಎಸ್. ಐ ರೇಣುಕಾ ರವರು ಯಾವುದೇ ಅಹಿತಕರ ಘಟನೆ ನಡೆಯಂತೆ ಕೈಗೊಂಡ ಕ್ರಮದ ಬಗ್ಗೆ ಎಲ್ಲೆಡೆ ಶ್ಲಾಘನೇ ವ್ಯಕ್ತವಾಗಿದೆ.ಪೊಲೀಸರನ್ನು ನಿಯೋಜಿಸಿದ ರೀತಿ ಮೆರವಣಿಗೆ ಸುಗಮವಾಗಿ ಸಾಗುವಂತೆ ಮಾಡುವಲ್ಲಿ ರೇಣುಕಾ ರವರ ಕಾರ್ಯವೈಖರಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ ✍️ಸೂರಿ ಬಣಕಲ್