ಕೈಲಾಸವನ್ನು ಧರೆಗಿಳಿಸಿದ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಮತ್ತಿಕಟ್ಟೆ

ಬಣಕಲ್: ಗಣೇಶ ಚತುರ್ಥಿಗೆ ಎಲ್ಲ ಕಡೆ ವಿಭಿನ್ನವಾಗಿ ವಿಶೇಷವಾಗಿ ಗಣೇಶನನ್ನ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರ ಮಾಡುತ್ತಾರೆ. ಅನೇಕ ವರ್ಷಗಳಿಂದ ಗಣೇಶನನ್ನ ಹೀಗೂ ಕೂರಿಸಬಹುದಾ ಅಂತಾ ಅಚ್ಚರಿ ಪಡುವಂತೆ ವಿನಾಯಕನನ್ನ ಕೂರಿಸಿ ಹಬ್ಬ ಮಾಡುತ್ತಾ ಬಂದಿರೋ ಮತ್ತಿಕಟ್ಟೆ ಗ್ರಾಮದ ಯುವಕರು ಈ ಬಾರಿ ಅತ್ಯಂತ ವಿಭಿನ್ನವಾದ ಅಲಂಕಾರವನ್ನ ಮಾಡಿದ್ದಾರೆ.

ಮತ್ತಿಕಟ್ಟೆ ಗ್ರಾಮದಲ್ಲಿ ಈ ಬಾರಿ ಅದ್ದೂರಿಯಾಗಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ವಿವಿಧ ಬಗೆಯ ಅಲಂಕಾರಗಳಿಂದ ಮಂಟಪಗಳನ್ನು ಸಿಂಗರಿಸಿರುವುದು ನೋಡುಗರನ್ನು ವಿಸ್ಮಯ ಲೋಕಕ್ಕೆ ಕರೆದೋಯ್ಯುವಂತಿತ್ತು. ಸಾಕ್ಷಾತ್ ಕೈಲಾಸವೇ ಧರೆಗಿಳಿದ ಹಾಗೆ ಅಲಂಕಾರಗೊಂಡಿರುವುದು ನಮ್ಮನ್ನು ಕೈಲಾಸಕ್ಕೆ ಕರೆದೊಯ್ದ ಅನುಭವವಾಯಿತು, ವಿವಿಧ ಬಗೆಯ ವರ್ಣರಂಜಿತ ವಿದ್ಯುತ್ ಅಲಂಕಾರಗಳಿಂದ ಗಣೇಶ ಮೂರ್ತಿಯನ್ನು ಅಲಂಕರಿಸುವುದು ನೋಡುಗರನ್ನು ನಿಬ್ಬೆರಗಾಗಿಸುವಂತಿದೆ. ಗಣೇಶನ ಮೇಲ್ಬಾಗದಲ್ಲಿ ಶಿವನ ಮುಖದ ಅಕೃತಿ ಪಕ್ಕದಲ್ಲಿ ಗಂಗೆಯ ಚಿಮಿಸುವಿಕೆ, ಬೆಟ್ಟಗುಡ್ಡಗಳ ಚಿತ್ರಣ ಮೇಲ್ಬಾಗದಲ್ಲಿ ಮಂಜು ಗಡ್ಡೆಯ ಹಾಗೆ ಕಾಣುವ ಆಕಾರಗಳು ಎಡಭಾಗದಲ್ಲಿ ಶಿವಲಿಂಗದ ನಿರ್ಮಾಣ. ಇದೆಲ್ಲವನ್ನೂ ನೋಡುತ್ತಿದ್ದರೆ ಕೈಲಾಸಕ್ಕೆ ಹೋಗಿ ಬಂದ ಅನುಭವ ಭಕ್ತರಿಗೆ ಸಿಗುತ್ತದೆ. ಹಲವು ದಿನಗಳಿಂದ ಯುವಕರು ಶ್ರಮ ಪಟ್ಟು ಮಾಡಿದ ಕಲಾಕೃತಿ ನಿಜಕ್ಕೂ ಮೆಚ್ಚುವಂತದೆ. ಭಕ್ತಾದಿಗಳು ಒಮ್ಮೆ ಭೇಟಿ ನೀಡಿ ಯುವಕರ ಕೈ ಚಳಕದಿಂದ ಮೂಡಿಬಂದ ಕೈಲಾಸ ಸೃಷ್ಟಿಯ ಚಿತ್ರಣ ನೋಡಿ ಆನಂದಿಸಿ ದೇವರ ದರ್ಶನ ಪಡೆದುಕೊಳ್ಳಿ.

ವರದಿ ✍️ಸೂರಿ ಬಣಕಲ್