ಮುಚ್ಚಲ್ಪಟ್ಟ ಚರಂಡಿಯನ್ನು ಸ್ವಚ್ಛಗೊಳಿಸಿದ ಸ್ಥಳೀಯ ಮಹಿಳೆಯರು ಮತ್ತು ಮಕ್ಕಳು

ಬಣಕಲ್ : ಮಹಿಳೆಯರು ಮತ್ತು ಮಕ್ಕಳು ಸೇರಿ ಬಣಕಲ್ ಗ್ರಾಮ ಪಂಚಾಯಿತಿ ಬಳಿಯ ಗುಂಡಿ ಬಿದ್ದ ರಸ್ತೆಯಲ್ಲಿ ಮಳೆಯಿಂದಾಗಿ ರಸ್ತೆ ತುಂಬಾ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುತ್ತಿದ್ದರು ಕಾರಣ ಮಳೆ ನೀರು ಹರಿದು ಹೋಗುವ ಸಣ್ಣ ತೋಡಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಗಿಡ ಗುಂಟೆಗಳು ಹಾಗೂ ಹೂಳು ತುಂಬಿಕೊಂಡಿತ್ತು ಹೀಗಾಗಿ ರಸ್ತೆಯಿಂದ ಹರಿದು ಬರುವ ನೀರು ಅಲ್ಲಲ್ಲೇ ಸಂಗ್ರಹವಾಗಿ ದುರ್ವಾಸನೆಗೆ ಕಾರಣವಾಗಿತ್ತು. ಅದರ ಬಗ್ಗೆ ಯಾರು ಗಮನಹರಿಸದಿದ್ದಾಗ ಅಕ್ಕ ಪಕ್ಕದ ಮಹಿಳೆಯರು ಮತ್ತು ಮಕ್ಕಳು ತಾವೇ ಖುದ್ದಾಗಿ ರಸ್ತೆಗೆ ಇಳಿದು ಗಿಡ ತ್ಯಾಜ್ಯಗಳಿಂದ ಮುಚ್ಚಲ್ಪಟ್ಟ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹೋಗುವಂತೆ ಮಾಡಿದರು. ಈ ಒಂದು ಸ್ವಚ್ಛತಾ ಕಾರ್ಯದಲ್ಲಿ ಸುಚೇತಾ, ರೇಷ್ಮಾ, ಸುಧಾನ್ವಿ ತ್ರಿಷಾ, ರಂಜನ್ ತುಷಾರ್ ಪಾಲ್ಗೊಂಡಿದ್ದರು ಇವರ ಈ ಕಾರ್ಯಕ್ಕೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.