ಬಡತನಕ್ಕೆ ಅಡ್ಡಿಯಾಗದ ಶಿಕ್ಷಣ:ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾದ ವಿದ್ಯಾರ್ಥಿಯ ಸಾಧನೆಗೆ ಪೋಷಕರು ಸಂತಸ

ಬಡತನದ ಸಂಕಷ್ಟದಿಂದ ಜೀವನ‌ ನಡೆಸಲು ದೂರದ ದಾವಣೆಗೆರೆ ಜಿಲ್ಲೇಯ ಲಂಬಾಣಿ ತಾಂಡದಿಂದ ವಲಸೆ ಬಂದ ಕುಟುಂಬದ ವಿದ್ಯಾರ್ಥಿ ಇಂದು ಬಣಕಲ್ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿಕೊಂಡು ಕಡು ಬಡತನದಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಗ್ರಾಮಕ್ಕೆ ಹಾಗೂ ಕುಟುಂಬಕ್ಕೆ ಹೆಮ್ಮೆ ತಂದಿದ್ದಾನೆ. ಸಾದಾರಣವಾಗಿ ತಾಂಡಗಳಿಂದ ಕಾಫಿ ತೋಟಕ್ಕೆ ಬಂದವರು ಯಾರು ಸಹ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಬಹಳ ಕಡಿಮೆ ಅಂತದರಲ್ಲಿ ಈ ಕುಟುಂಬ ತನ್ನ ಮಗ ಜಯಸೂರ್ಯನಿಗೆ ವಿದ್ಯಾಭ್ಯಾಸ ಕೊಡಿಸಿ ಸ್ಫೂರ್ತಿ ಆಗಿದ್ದಾರೆ.

ದಾವಣೆಗೆರೆ ಜಿಲ್ಲೆಯ ಮಡಿಕೆ ನಿಚ್ಚಾಪುರ ಎಂಬ ತಾಂಡದ ನಿವಾಸಿಗಳಾದ ಇವರು ವರ್ಷಗಳ ಹಿಂದೆ ಕೆಲಸ ಹರಸಿಕೊಂಡು ಬಾಳೂರು ಬಳಿಯ ಕಾಡುಗದ್ದೆ ಎಸ್ಟೇಟ್ ಗೆ ಬಂದಿದ್ದರು. ಎಸ್ಟೇಟ್ ಲೈನ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಡು ಬಡತನವಿದ್ದರೂ ಸಹ ಪೋಷಕರು ತಮ್ಮಂತೆ ಮಗ ಕಷ್ಟ ಪಡಬಾರದೆಂದು ಶಾಲೆ ಬಿಡಿಸದೆ ತನ್ನ ಮಗನಿಗೆ ವಿದ್ಯಾಭ್ಯಾಸ ಮಾಡಿಸಿದ್ದಾರೆ. ತಂದೆ ವಸಂತ ನಾಯ್ಕ್, ತಾಯಿ ನೇತ್ರಾವತಿ ದಂಪತಿಯರ ಪುತ್ರನಾದ ವಿ. ಜಯಸೂರ್ಯ ಬಣಕಲ್ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ.

ಈ ವರ್ಷದ ಎಸ್.ಎಸ್. .ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿ 490 ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದುವ ಮೂಲಕ ತಂದೆ ತಾಯಿಯರಿಗೆ ಹೆಮ್ಮೆ ತಂದಿದ್ದಾನೆ. ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ ಫಲ ಇವತ್ತು ನಮ್ಮ ಕುಟುಂಬಕ್ಕೆ ಮಗ ಉತ್ತಮ ಅಂಕ ಗಳಿಸುವ ಮೂಲಕ ಹೆಮ್ಮೆ ತಂದಿದ್ದಾನೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ವರದಿ ✍️ಸೂರಿ ಬಣಕಲ್