ಬಣಕಲ್ ಪಿ ಎಸ್ ಐ ರೇಣುಕಾ ನೇತೃತ್ವದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ 7 ಆರೋಪಿಗಳ ಬಂಧನ

ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಬಣಕಲ್ ಪೊಲೀಸರು ದಾಳಿ ನಡೆಸಿ 7ಆರೋಪಿಗಳನ್ನು ಬಂಧಿಸಿರುವ ಘಟನೆ ಬಣಕಲ್ ಠಾಣಾ ವ್ಯಾಪ್ತಿಯ ಕೋಗಿಲೆ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಸಂಜೆ ಕೋಗಿಲೆ ಬಳಿ ಅಕ್ರಮವಾಗಿ ಇಸ್ಪೀಟ್ ಎಲೆಗಳಿಂದ ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಟ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಣಕಲ್ ಪೊಲೀಸ್ ಠಾಣಾ ಮಹಿಳಾ ಪಿ.ಎಸ್.ಐ ರೇಣುಕಾ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ದಾಳಿ ವೇಳೆ 7ಆರೋಪಿಗಳೊಂದಿಗೆ ಇಸ್ಪೀಟ್ ಎಲೆಗಳನ್ನು ಹಾಗೂ ಆಟಕ್ಕೆ ಬಳಸಿದ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.

ಬಣಕಲ್ ಠಾಣಾ ಸಿಬ್ಬಂದಿಗಳಾದ ಜಗದೀಶ್. ಮಾಲತೇಶ್. ಅಶೋಕ. ಕಿರಣ. ಸಚಿನ್. ಮೆಹಬೂಬ್. ದಿಲೀಪ್ ದಾಳಿ ಸಂದರ್ಭದಲ್ಲಿ ಹಾಜರಿದ್ದರು. ಈ ಬಗ್ಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.