ಬಣಕಲ್ :DSBG ಕಾಲೇಜಿನ ಮುಂಭಾಗದಲ್ಲಿ ಪ್ರತೀ ಶುಕ್ರವಾರ ಆಗುತ್ತಿರುವ ಸಂತೆಯಿಂದಾಗಿ ಅಲ್ಲಿನ ಸ್ವಚತೆ ಹಾಳಗುತ್ತಿದ್ದು, ಹಾಗೂ ಅಲ್ಲಿ ಶೈಕ್ಷಣಿಕ ವಾತಾವರಣ ಹಾಳಾಗುತ್ತಿದೆ, ಹಾಗೂ ಅಲ್ಲಿ ಸಂತೆ ಮಾಡುವುದರಿಂದ ಪ್ರತಿನಿತ್ಯ ಕಾಲೇಜಿಗೆ ಬರುವ ನೂರಾರು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು ಅಲ್ಲಿ ನಡೆಯುತ್ತಿರುವ ಸಂತೆಯನ್ನು ಬೇರೆಡೆ ಸ್ಥಳಾಂತರಿಸಿ ಅಥವಾ ಅಲ್ಲಿ ನೂಕ್ತ ಸ್ವಚ್ಛತೆಯನ್ನ ಕಾಪಾಡುವಂತೆ ಸೂಕ್ತ ನಿರ್ಧಾರವನ್ನು ತೆಗೆದುಕೊಂಡು, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು, ವಿದ್ಯಾರ್ಥಿಗಳ ಭವಿಷ್ಯದ ನಾಯಕರು ಎನ್ನುವ ಸರ್ಕಾರಗಳು, ಇಂದು ವಿದ್ಯಾರ್ಥಿಗಳನ್ನೂ ಈ ರೀತಿಯ ಹಲವು ಶೈಕ್ಷಣಿಕ ಸಮಸ್ಯೆಗಳಿಗೆ ತಳ್ಳುತ್ತಿದೆ, ಇದು ಸಮಂಜಸವಲ್ಲ, ಹಾಗೂ ಕೆಲವೇ ಸಮಯದಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಿ ಸೂಕ್ತ ಕ್ರಮವನ್ನೂ ತೆಗೆದುಕೊಳ್ಳಬೇಕು ಇಲ್ಲದಿದ್ದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಡಿಗೆರೆ ವತಿಯಿಂದ ಪ್ರತಿಭಟನೆಯ ಎಚ್ಚರಿಕೆಯನ್ನೂ ಈ ಮನವಿಯ ಮೂಲಕ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ರಿಷಿತ್ ಬಣಕಲ್ ವಿದ್ಯಾರ್ಥಿ ಪ್ರಮುಕ್ ಮನು ಬಣಕಲ್ ಎಬಿವಿಪಿ ಕಾರ್ಯಕರ್ತರಾದ ಯಶಸ್ ನಿತಿನ್ ಕೃತಿಕ್ ಅಭಿ ಪ್ರೀತಂ ಹಾಗೂ ಕಾಲೇಜು ವಿದ್ಯಾರ್ಥಿ ಗಳು ಇದ್ದರು