ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಬಣಕಲ್ ವಿದ್ಯಾ ಭಾರತಿ ಶಾಲೆಗೆ ಪ್ರಶಸ್ತಿ

ದಿನಾಂಕ 8 11 2023 ಬುಧವಾರದಂದು ಮೂಡಿಗೆರೆ ಯ ಬೆಥನಿ ಸ್ಕೂಲ್ ನಲ್ಲಿ L P S ಮತ್ತು H P S ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆದಿದ್ದು ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿಗಳಾದ 3ನೇ ತರಗತಿಯ ಭಾನ್ವಿ ಆಶುಭಾಷಣ ಪ್ರಥಮ ಸ್ಥಾನ, ವಿದ್ವತ್ ಶರ್ಮಾ ಲಘು ಸಂಗೀತ ಪ್ರಥಮ ಸ್ಥಾನ ಮತ್ತು ಧಾರ್ಮಿಕ( ಸಂಸ್ಕೃತ) ಪಠಣ ತೃತೀಯ ಸ್ಥಾನ, 7ನೇ ತರಗತಿಯ ಸನ್ನಿಧಿ ಬಿ ಎಸ್ ಆಶುಭಾಷಣ ಪ್ರಥಮ ಸ್ಥಾನ, ಸಾನ್ವಿಕ ಹೆಚ್ ಜಿ ಲಘು ಸಂಗೀತ ಪ್ರಥಮ ಸ್ಥಾನ, 6ನೇ ತರಗತಿಯ ಚಿನ್ಮಯಿ ಡಿ ಧಾರ್ಮಿಕ ಪಠಣ (ಸಂಸ್ಕೃತ)ಪ್ರಥಮ ಸ್ಥಾನ, 7ನೇ ತರಗತಿ ಸಾತ್ವಿಕ ಬಿ ಎಸ್ ಕವನ ವಾಚನ ದ್ವಿತೀಯ ಸ್ಥಾನಪಡೆದಿದ್ದಾರೆ. ಭಾಗವಹಿಸಿದ ಎಲ್ಲ ಪ್ರೀತಿಯ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡಿದ ಶಿಕ್ಷಕರಿಗೆ ಹಾಗೂ ಸಹಕರಿಸಿದ ಆತ್ಮೀಯ ಪೋಷಕರಿಗೂ ಸಂಸ್ಥೆಯ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು