ಬಣಕಲ್ ಪೋಲೀಸರ ಕಾರ್ಯಾಚರಣೆ :ಸರಣಿ ಕಳ್ಳತನ ಆರೋಪಿಯ ಸೆರೆ

ಬಣಕಲ್ :ಕೆಲವು ದಿನಗಳ ಹಿಂದೆ ಬಣಕಲ್ ನಲ್ಲಿ ಸರಣಿ ಕಳ್ಳತನ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂದಿಸುವಲ್ಲಿ ಬಣಕಲ್ ಪಿ. ಎಸ್.ಐ ಜಂಬೂರಾಜ್ ಮಹಾಜನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾವಣೆಗೆರೆ ಮೂಲದ ಹುಸೇನ್ ಸಾಬ್ ಬಿನ್ ಅಬ್ದುಲ್ ರಝಕ್ ಬಂಧಿತ ಆರೋಪಿ.ಕೆಲವು ದಿನಗಳ ಹಿಂದೆ ಬಣಕಲ್ ನಲ್ಲಿ ಸರಣಿ ಕಳ್ಳತನ ನಡೆದಿತ್ತು. ಮೊಬೈಲ್ ಅಂಗಡಿ ದಿನಸಿ ಅಂಗಡಿ.ಹಾಗೂ ಬಟ್ಟೆ ಅಂಗಡಿಯಲ್ಲಿ ಹಣ ಹಾಗೂ ಮೊಬೈಲ್ ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣವನ್ನು ಸವಲಾಗಿ ಸ್ವೀಕರಿಸಿದ ಬಣಕಲ್ ಪೊಲೀಸರು ಎಲ್ಲಾ ಮೂಲಗಳಿಂದ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಯನ್ನು ಮಂಗಳೂರಿನಲ್ಲಿ ಪತ್ತೆ ಹಚ್ಚಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಯ ಸೆರೆ ಹಿಡಿದ ಬಣಕಲ್ ಪೋಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕಾರ್ಯಾಚರಣೆಯಲ್ಲಿ ಪಿ. ಎಸ್. ಐ. ರನ್ನಗೌಡ ಪಾಟೀಲ್, ಸಿಬ್ಬಂದಿಗಳಾದ ಜಗದೀಶ್, ಮೆಹಬೂಬ್, ದಿಲೀಪ್, ಕಿರಣ್ ಇದ್ದರು