ಬಣಕಲ್: ಈ ಅಜ್ಜಿ ಇಳಿ ವಯಸ್ಸಿನಲ್ಲಿ ಮಕ್ಕಳು, ಮೊಮ್ಮಕ್ಕಳ ಜತೆಗೆ ಕಾಲ ಕಳೆಯಬೇಕಿತ್ತು. ಆದರೇ ಅದ್ಯಾಕೋ ಗೊತ್ತಿಲ್ಲ ಮನೆ ಬಿಟ್ಟು ಬಂದಿದ್ದಾಳೆ. ತಿಂಗಳು ಗಟ್ಟಲೆ ಸಬ್ಬೆನಹಳ್ಳಿ ಹಸೆನಬ್ಬ ಅವರ ಹಾಳು ಮನೆಯಲ್ಲಿ ವಾಸ್ತವ್ಯ ಹೂಡಿದ್ದರು .ಪರಿಸ್ಥಿತಿ ಮನಗೊಂಡು ಪಲ್ಗುಣಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು. ಉಪಾಧ್ಯಕ್ಷರು. ಪಿ.ಡಿ.ಓ ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಚಿಕ್ಕಮಗಳೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ ಈ ಸಂದರ್ಭದಲ್ಲಿ ಸಮಾಜ ಸೇವಕ ಆರಿಫ್ ಅವರು ಚಿಕ್ಕಮಗಳೂರಿಗೆ ಕರೆದೋಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.
