ಬಣಕಲ್:ಬಣಕಲ್ ನಲ್ಲಿ ಪ್ರಯಾಣಿಕರಿಗೆ ಬಸ್ ಕಾಯಲು ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿ ಕೊಡಿ ಎಂಬ ಬೇಡಿಕೆ ಹಲವಾರು ವರ್ಷಗಳದ್ದು.ಮತ್ತೆ ಅದೇ ಕೂಗು ಸಾರ್ವತ್ರಿಕವಾಗಿ ಕೇಳಿ ಬಂದಿದ್ದು, ಲೋಕಸಭಾ ಚುನಾವಣಾ ಈ ಕಾಲಘಟ್ಟದಲ್ಲಾದರೂ ಈ ಮನವಿಗೆ ಸ್ಪಂದನೆ ಸಿಕ್ಕೀತೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಪ್ರಯಾಣಿಕರಿಗೆ ಬಸ್ ಕಾಯಲು ಸರಿಯಾದ ತಂಗುದಾಣವಿಲ್ಲದೆ ಮಳೆ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಕಳೆದ ಹಲವಾರು ವರ್ಷಗಳಿಂದ ಸತತವಾಗಿ ಮುಂದುವರಿದಿದೆ. ಸಾರ್ವಜನಿಕ ಸಂಘಟನೆಗಳು ಹಲವು ಉನ್ನತ ಮಟ್ಟದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ.ಅ ಬಳಿಕ ಸರಕಾರಗಳು ಬದಲಾದವು, ಅಧಿಕಾರಿಗಳು ಬದಲಾದರೂ ಬಣಕಲ್ ಸ್ಥಿತಿ ಮಾತ್ರ ಬದಲಾಗದೇ ಹಾಗೆಯೇ ಉಳಿದಿರುವುದು ಮಾತ್ರ ವಿಪರ್ಯಾಸವೇ ಸರಿ. ಮಕ್ಕಳಿಂದ ಹಿಡಿದು ಮುದಕರ ತನಕ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೊಡೆ ಹಿಡಿದು ಓದ್ದೆಯಾಗಿ ಬಸ್ ಕಾಯುತ್ತಾ ನಿಲ್ಲಬೇಕಾದರೆ, ಬೇಸಿಗೆಕಾಲದಲ್ಲಿ ಬಿಸಿಲಿನ ತಾಪಕ್ಕೆ ಏನು ಮಾಡಲಾಗದೆ ರಸ್ತೆಯ ಬದಿಯಲ್ಲಿ ಕಾಯುತ್ತಾ ನಿಲ್ಲಬೇಕಾಗಿದೆ.
ಬಣಕಲ್ ಗ್ರಾಮಸ್ಥ ಮಧು ಆಚಾರ್ಯ ಮಾತನಾಡಿ ಬಣಕಲ್ ನಲ್ಲಿ ಬಸ್ ನಿಲ್ದಾಣವಿಲ್ಲ ಇಲ್ಲಿಗೆ ಬರುವ ಪ್ರಯಾಣಿಕರಿಗೆ ಬಸ್ಸಿಗಾಗಿ ಎಲ್ಲಿ ನಿಲ್ಲಬೇಕು ಎಂಬ ಗೊಂದಲ ಇದೆ. ಪ್ರಯಾಣಿಕರು ಬಸ್ ಗಾಗಿ ಅಂಗಡಿಗಳ ಎದುರು ನಿಲ್ಲುತ್ತಿದ್ದಾರೆ. ಇದರ ಜೊತೆಗೆ ವರ್ತಕರು ಅಂಗಡಿಗೆ ಗ್ರಾಹಕರು ಬರುವುದಿಲ್ಲ ಅಂಗಡಿ ಬಿಟ್ಟು ನಿಲ್ಲಿ ಎಂದು ಹೇಳುತ್ತಾರೆ. ಅವರು ಹೇಳುವುದು ಸರಿ ಆದರೇ ಪ್ರಯಾಣಿಕರಿಗೆ ಬೇರೆ ಮಾರ್ಗವಿಲ್ಲ ಅಂಗಡಿಯೇ ಮುಂದೆಯೇ ನಿಲ್ಲಬೇಕಾದ ಪರಿಸ್ಥಿತಿ.
ದಯವಿಟ್ಟು ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿ ಆದಷ್ಟು ಬೇಗ ಬಣಕಲ್ ಗ್ರಾಮಸ್ಥರ ಹಲವಾರು ವರ್ಷಗಳ ಬೇಡಿಕೆ ಕೈಗೂಡುವಂತೆ ಮಾಡಿ ಎಂಬುದು ನಮ್ಮೆಲ್ಲರ ಆಶಯ ಎಂದರು. ✍️ವರದಿ :ಸೂರಿ ಬಣಕಲ್