ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ಮೂರು ಅಂಗಡಿಗಳ ಬೀಗ ಮುರಿದ ಕಳ್ಳರು ಅಂಗಡಿಯ ಡ್ರಾಯರ್ನಲ್ಲಿ ಇರಿಸಿದ್ದ ನಗದಿನೊಂದಿಗೆ ಪರಾರಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು ,ಕಳ್ಳತನವಾದ ಪ್ರಕರಣ ಬೆಳಕಿಗೆ ಬಂದಿದೆ.
ಬಣಕಲ್ ಕೆ ಎಂ ರಸ್ತೆಯಲ್ಲಿ ಇರುವ ಸಂಭ್ರಮ್ ಮಹೇಶ್ ಮಾಲೀಕತ್ವದ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ ದಿನಸಿ ಅಂಗಡಿ, ಮೊಬೈಲ್ ಅಂಗಡಿ ಹಾಗೂ ಬಟ್ಟೆ ಅಂಗಡಿಯಲ್ಲಿ ಕಳ್ಳತನ ನಡೆದಿದೆ ಎಂದು ತಿಳಿದು ಬಂದಿದೆ ರಾತ್ರಿ ವೇಳೆ ಅಂಗಡಿಯ ಮೇಲ್ಚಾವಣಿಯಿಂದ ಇಳಿದ ಕಳ್ಳರು ಅಂಗಡಿಯ ಡ್ರಾವರ್ನಲ್ಲಿದ್ದ ನಗದು ದೋಚಿದ್ದಾರೆ, ಮೊಬೈಲ್ ಅಂಗಡಿಯಲ್ಲಿದ್ದ ಮೊಬೈಲ್ ಹಾಗೂ ಚಿಲ್ಲರೆ ಹಣ ಕಳವಾಗಿದೆ ಎಂದು ತಿಳಿದು ಬಂದಿದೆ.ಸದ್ಯ ಪೋಲಿಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.