ಬಣಕಲ್: ತಾಲ್ಲೂಕಿನ ಬಣಕಲ್ ಗ್ರಾಮದ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿಯನ್ನು ಹೊಡೆದು ಅದರಲ್ಲಿದ್ದ ಹಣವನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಸಂಜೆ 4ಗಂಟೆ ಸಮಯದಲ್ಲಿ ದೇವಸ್ಥಾನಕ್ಕೆ ಹೋದಾಗ ರಾಡಿನಿಂದ ಹುಂಡಿಯ ಬೀಗ ಮುರಿದು ಅದರಲ್ಲಿದ್ದ ಹಣವನ್ನು ಕಳವು ಆಗಿರುವುದು ಕಂಡು ಬಂದಿದೆ , ಯಾರೋ ಅಪರಿಚಿತ ವ್ಯಕ್ತಿ ದೇವಸ್ಥಾನದಿಂದ ಹೋಗಿರುವುದನ್ನು ಅಕ್ಕ ಪಕ್ಕದ ನಿವಾಸಿಗಳು ಕಂಡಿದ್ದಾರೆ. ದೇವಸ್ಥಾನದ ಹಣ ಕಳವು ಮಾಡಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ದೇವಿಯ ಹಣ ಕಳವು ಮಾಡಿರುವುದರಿಂದ ಅವನಿಗೆ ದೇವಿ ತಕ್ಕ ಶಿಕ್ಷೆ ಕೊಡುತ್ತಾಳೆ ಎಂದು ದೇವಸ್ಥಾನ ಯುವಕ ಮಂಡಳಿಯ ಸದಸ್ಯ ಅರುಣ್ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
