ಬಣಕಲ್ :ಸುಮಾರು 41ವರ್ಷಗಳ ಕಾಲ ಕೊಟ್ಟಿಗೆಹಾರ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತಿದ್ದ ಪಿ,ಕೆ, ದಿವಾಕರ್ ಕಾರಂತ್ ಅವರಿಗೆ ಶಾಲು ಹೊದಿಸಿ ಫಲ ಪುಷ್ಪದೊಂದಿಗೆ ಗೌರವಿಸಿ ಬೀಳ್ಕೊಡುಗೆ ಸಮಾರಂಭ ನಡೆಸಿ ಸನ್ಮಾನಿಸಲಾಯಿತು.ಇದೆ ವೇಳೆ ಕಾರಂತ್ ರವರು ಇಷ್ಟು ವರ್ಷಗಳ ಸಹಕರಿಸಿದ ಗ್ರಾಮಸ್ಥರು ಹಾಗೂ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.ಇದೆ ಸಂದರ್ಭದಲ್ಲಿ ಬಣಕಲ್ ಅಂಚೆ ಕಚೇರಿ ಅಂಚೆ ಪಾಲಕರು ಮಹೇಂದ್ರ ಮೌರ್ಯ.Aidgsu ನಾ ಕಾರ್ಯದರ್ಶಿ ಹನುಮಂತಪ್ಪ, ಹಾಗೂ ಸಿಬ್ಬಂದಿಗಳಾದ, ರವಿಕುಮಾರ್ ಕೃಷ್ಣ ರವೀಂದ್ರ ಮಂಜುನಾಥ್ ಸುರೇಶ್ ಭರತ್ ಪರ್ವತಪ್ಪ ನಿಶಾಂತ್ ಬಣಕಲ್, ಶಶಿಕುಮಾರ್ ಮತ್ತಿತರರು ಹಾಜರಿದ್ದರು
