ಬಣಕಲ್ :ಒಬ್ಬ ಇಂಜಿನಿಯರ್ ತಪ್ಪು ಮಾಡಿದರೆ ಒಂದು ಮನೆ ಬೀಳಬಹುದು ಒಬ್ಬ ಲಾಯರ್ ತಪ್ಪಿನಿಂದ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಹುದು. ಒಬ್ಬ ವೈದ್ಯನ ತಪ್ಪಿನಿಂದ ಒಬ್ಬ ರೋಗಿ ಸಾಯಬಹುದು. ಆದರೆ ಒಬ್ಬ ಶಿಕ್ಷಕ ತಪ್ಪಿದರೆ ಇಡೀ ವಿದ್ಯಾರ್ಥಿಗಳ ಭವಿಷ್ಯವೇ ಶೂನ್ಯವಾಗುವುದು. ಅಂತಹ ಒಂದು ಕಟ್ಟು ನಿಟ್ಟಿನ ಜವಾಬ್ದಾರಿ ಶಿಕ್ಷಕರ ಮೇಲಿದೆ ನಮ್ಮೆಲ್ಲರ ಜೀವನದಲ್ಲಿ ಮುಂದೆ ಬನ್ನಿ ಎಂದು ಹೇಳುವ ಮೊದಲ ವ್ಯಕ್ತಿಯೇ ಶಿಕ್ಷಕ..
ಶಾಲೆಯ ಮೆಟ್ಟಿಲು ಹತ್ತಿ ಇಳಿದ ವಿದ್ಯಾರ್ಥಿ ತನ್ನ ಜೀವನದಲ್ಲಿ ಬಹಳಷ್ಟು ಸಾಧಿಸಿ, ಗಳಿಸಿ ದೊಡ್ಡ ಮನುಷ್ಯನಾಗಿ ಬದಲಾದದರೂ ತನ್ನನ್ನು ರೂಪಿಸಿದ ಶಿಕ್ಷಕ ಅದೇ ಶಾಲೆಯ ನಾಲ್ಕು ಗೋಡೆಯ ಒಳಗೆ ತನ್ನ ಸೇವೆಯನ್ನು ಮುಂದುವರಿಸುತ್ತಿರುತ್ತಾರೆ ಎಂಬುವುದನ್ನು ಕಾಣುತ್ತೇವೆ. ಯಾವುದೇ ಪ್ರಶಸ್ತಿಯ, ಪ್ರಚಾರದ ಬೆನ್ನು ಹತ್ತದೆ ತನ್ನಲ್ಲಿರುವ ವಿದ್ಯಾ ಜ್ಯೋತಿಯನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ತೃಪ್ತಿ ಕಾಣುವ ಎಷ್ಟೋ ಶಿಕ್ಷಕರು ನಮ್ಮಲ್ಲಿದ್ದಾರೆ. ಎಲೆ ಮರೆ ಕಾಯಿಯಂತೆ ಅವರು ಶಾಲೆಯ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಪಣತೊಟ್ಟು ನಿಸ್ವಾರ್ಥರಾಗಿ ಸೇವೆಯಲ್ಲಿರುತ್ತಾರೆ. ಅಂತಹ ನೂರಾರು ಶಿಕ್ಷಕರ ಪೈಕಿ ಒಬ್ಬರಾಗಿದ್ದಾರೆ ಬಣಕಲ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪಿ ವಾಸುದೇವ್ ಸರ್. ಮೂಲತ:ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಊರಿನಲ್ಲಿ ತಂದೆ ಅನಂತರಾಮ ಭಟ್ ಮತ್ತು ತಾಯಿ ಲಕ್ಷ್ಮಿ ಮಗನಾಗಿ 16-5-1964ರಲ್ಲಿ ಜನಿಸಿದರು. ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಉಜಿರೆಯಲ್ಲಿ ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಯನ್ನು ಸೇಲಂ ನಲ್ಲಿ ಮುಗಿಸಿದರು ದಿನಾಂಕ: 05-07-1985ರಲ್ಲಿ ಶಿಕ್ಷಕರಾಗಿ ಬಣಕಲ್ ಪ್ರೌಢಶಾಲೆಯಲ್ಲಿ ಸೇವೆ ಆರಂಭಿಸಿದರು ಸರಿ ಸುಮಾರು 37ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಅಪಾರ ವಿದ್ಯಾರ್ಥಿ ಬಳಗವನ್ನು ಹೊಂದಿದ್ದಾರೆ.ಈಗ ಸಮುದಾಯದ ಕ್ರೂಡಿಕರಣ ಮತ್ತು ಅವರೊಡನೆ ಬೆಳೆದಿರುವ ಆತ್ಮೀಯತೆ ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಬಹಳ ಉತ್ತಮ ಪರಿಣಾಮ ಬೀರಿರುವುದು ಶ್ಲಾಘನೀಯ. ಶಿಕ್ಷಕರಾಗಿ ಹಲವು ವರ್ಷಗಳಿಂದ ಬಣಕಲ್ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಎಲ್ಲಾ ಮಕ್ಕಳ ಪಾಲಿನ ಮೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ 01-02-2018 ರಂದು ಮುಖ್ಯ ಶಿಕ್ಷಕರಾಗಿ ಬಡ್ತಿಹೊಂದಿದ ಪಿ. ವಾಸುದೇವ್ ಸಹ ಶಿಕ್ಷಕರೊಂದಿಗೆ ಶಾಲೆಗೆ ಪ್ರತಿ ವರ್ಷ ಉತ್ತಮ ಫಲಿತಾಂಶ ತರುವಲ್ಲಿ ಯಶಸ್ಸು ಕಂಡಿದ್ದಾರೆ. ತಾಲೂಕ್ಕಿನಲ್ಲೇ ಬಣಕಲ್ ಪ್ರೌಢ ಶಾಲೆಗೆ ಉತ್ತಮ ಶಾಲೆ ಎಂಬ ಹೆಗ್ಗಳಿಕೆ ಇದೆ. ಶಾಲಾ ಆಡಳಿತ ಮಂಡಳಿ ಕನ್ನಡ ಮಾಧ್ಯಮ ಮಾತ್ರ ಇದ್ದ ಶಾಲೆಗೆ ಇಂಗ್ಲಿಷ್ ಮಾಧ್ಯಮ ಕೂಡ ಸೇರ್ಪಡೆಗೊಳಿಸಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಿತು.ಆಗಿನ ಹಳೆಯ ವಿದ್ಯಾರ್ಥಿಗಳಿಂದ ಹಿಡಿದು ಈಗಿನ ವಿದ್ಯಾರ್ಥಿಗಳು ತಮ್ಮ ಮುಕ್ತ ಮಾತುಗಳಿಂದ ಶಾಲೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾರೆ.ಇದಕ್ಕೆ ಪ್ರಮುಖ ಕಾರಣ ಪಿ ವಾಸುದೇವ್ ಅವರು ನೀಡುತ್ತಿರುವ ಚಟುವಟಿಕೆಗಳನ್ನೊಳಗಂಡ ಕಲಿಕೆಯ ವಾತಾವರಣ. ಶಿಕ್ಷಕರ ಅಮೂಲ್ಯ ಸಮಯ ಅವರ ಪ್ರೀತಿ ಮತ್ತು ತಾಳ್ಮೆಕಂಡು ಪಿ ವಾಸುದೇವ್ ಸರ್ ಅಂದ್ರೆ ನಮಗೆಲ್ಲಾ ತುಂಬಾ ಇಷ್ಟ ಉಳಿದ ಶಿಕ್ಷಕರು ಸಹ ಅಷ್ಟೇ ಇಷ್ಟ ಎಂಬ ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿರುತ್ತಾರೆ ಒಟ್ಟಾರೆ ಪಿ. ವಾಸುದೇವ್ ಅವರು ಶಾಲೆಯೊಂದಿಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಶೈಕ್ಷಣಿಕವಾಗಿ ಶಾಲೆಯ ಶ್ರೇಯೋಭಿವೃದ್ಧಿಗೆ ಮತ್ತು ಶಾಲೆಯ ಮೂಲಭೂತ ಸೌಕರ್ಯಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ಧಿ ಮಾಡುವುದಕ್ಕೆ ಮುಖ್ಯ ಕಾರಣಕರ್ತರಾಗಿದ್ದಾರೆ ಎಂಬ ಅಂಶವನ್ನು ಇಲ್ಲಿ ಸ್ಮರಿಸಬಹುದಾಗಿದೆ. ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಶಾಲೆಯ ಶೈಕ್ಷಣಿಕ ಪ್ರಗತಿಗೆ ನೂರಕ್ಕೆ ನೂರರಷ್ಟು ತೊಡಗಿಸಿಕೊಂಡು ಶಾಲೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಹಾಗೆ ಸಹ ಶಿಕ್ಷಕರೊಂದಿಗೆ ಕೂಡ ಉತ್ತಮ ಬಾಂದವ್ಯ ಹೊಂದಿದ್ದಾರೆ.ಶಿಕ್ಷಕರು ಹಾಗೂ ಆಡಳಿತ ಮಂಡಳಿ ಜೊತೆ ನಿಂತು ಕೆಲಸ ಮಾಡಿದ ಫಲವಾಗಿ ಇಂದು ಶಾಲೆಗೆ ಉತ್ತಮ ಸೌಕರ್ಯ ಒದಗಿ ಬರಲು ಕಾರಣರಾಗಿದ್ದಾರೆ. ಮುಖ್ಯ ಶಿಕ್ಷಕರಾಗಿ ಅವರು ಶಾಲೆಗೆ ನೀಡಿದ ಕೊಡುಗೆ ಹೆಮ್ಮೆ ಪಡುವಂತಿದೆ.(1)ವಿದ್ಯಾರ್ಥಿಗಳ ವೈಜ್ಞಾನಿಕ ಆಸಕ್ತಿ ಬೆಳೆಸಲು ಹೊಸ ಸಂಶೋಧನೆಗಳನ್ನು ಮಾಡಲು ಅಟಲ್ ಲ್ಯಾಬ್ ಸ್ಥಾಪನೆ (2)15ಲಕ್ಷ ವೆಚ್ಚದಲ್ಲಿ ಸಭಾಂಗಣ.(3)ಶಾಲಾ ಆವರಣದಲ್ಲಿ ಶಿಕ್ಷಕರ ಸಹಕಾರದೊಂದಿಗೆ ಉತ್ತಮ ಕೈತೋಟ ರಚನೆ.(4)ಶಾಲಾ ವನ ನಿರ್ಮಾಣ (5)ಇಂಗು ಗುಂಡಿ ನಿರ್ಮಾಣ (6)ಉತ್ತಮ ಶೌಚಾಲಯ ನಿರ್ಮಾಣ (7)ಶಿಕ್ಷಕರ ಸಹಕಾರದೊಂದಿಗೆ ಶುದ್ಧ ಕುಡಿಯುವ ನೀರು ನಿರ್ಮಾಣ ಕುಡಿಯುವ ನೀರಿಗೆ ಅಕ್ವಾ ಗಾರ್ಡ್ ಸ್ಥಾಪನೆ.ಕ್ರೀಡಾ ಸಾಮಗ್ರಿ.ಗ್ರಂಥಾಲಯ. ಸಿಸಿ ಕ್ಯಾಮರಾ .ಬಾಸ್ಕೆಟ್ ಬಾಲ್ ಕ್ರೀಡಾಂಗಣ.ಇತ್ಯಾದಿಗಳು ಇಂದು ಈ ಶಾಲೆ ಗೆ ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.
ಕಳೆದ ಸಾಲಿನಲ್ಲಿ ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಪಡೆಯುವ ಮೂಲಕ ತಾಲ್ಲೂಕಿಗೆ ಹಾಗೂ ಗ್ರಾಮದ ಕೀರ್ತಿಗೆ ಪಾತ್ರರಾಗಿದ್ದಾರೆ ಮುಂದೆಯೂ ಹೀಗೆ ಉತ್ತಮ ಕೆಲಸ ನಿಮ್ಮಿಂದ ಆಗಲಿ ಎಂಬುದು ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಆಶಯವಾಗಿದೆ.
✍️ವರದಿ ಸೂರಿ ಬಣಕಲ್