ಬಣಕಲ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ “ಅರಿವು” ಕಾರ್ಯಕ್ರಮದ ಮುಖಾಂತರ ತಿಳುವಳಿಕೆ:ಪಿ. ವಾಸುದೇವ್

ಬಣಕಲ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ “ಅರಿವು” ಕಾರ್ಯಕ್ರಮದ ಮುಖಾಂತರ ತಿಳುವಳಿಕೆ:ಪಿ. ವಾಸುದೇವ್ ಬಣಕಲ್: ಬಣಕಲ್ ಪ್ರೌಢ ಶಾಲೆ ಬಣಕಲ್ ವತಿಯಿಂದ ಇಂದು ಅನುಭವಾತ್ಮಕ ಕಲಿಕೆ ಕಾರ್ಯಕ್ರಮದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮವನ್ನು ಶಾಲೆ ವತಿಯಿಂದ ಆಯೋಜನೆ ಮಾಡಿದ್ದರು ತಿಂಗಳಲ್ಲಿ ಪ್ರತಿ 3ನೇ ಶನಿವಾರದಂದು ಸರ್ಕಾರಿ ಇಲಾಖೆಗಳಿಗೆ ಭೇಟಿ ಮಾಡಿಸಿ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಶಿಕ್ಷಕ ವೃಂದ ಮುಂದಾಗಿದೆ ಇಂದು ಬಣಕಲ್ ನ ವಿದ್ಯುಚ್ಛಕ್ತಿ ಘಟಕಕ್ಕೆ ಭೇಟಿ ನೀಡಿ ವಿದ್ಯುತ್ ಸರಬರಾಜಿನ ಬಗ್ಗೆ ಅವುಗಳಿಂದ ಆಗುವ ಪ್ರಯೋಜನ ವಿದ್ಯುತ್ ನಿಂದ ಯಾವ ರೀತಿಯ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಮಕ್ಕಳು ಮಾಹಿತಿ ಪಡೆದುಕೊಂಡರು.ಹಾಗೆ ಬಣಕಲ್ ಗ್ರಾಮ ಪಂಚಾಯಿತಿ. ಪೋಸ್ಟ್ ಆಫೀಸ್.ಬ್ಯಾಂಕ್. ಗಳಿಗೆ ಭೇಟಿ ನೀಡಿ ಮಕ್ಕಳು ಅವಶ್ಯಕ ಮಾಹಿತಿಗಳನ್ನು ಪಡೆದುಕೊಂಡರು.ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಪಿ ವಾಸುದೇವ್ ಮಾತನಾಡಿ ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕು ಬರಿಯ ತುಂಬುವ ಚೀಲಗಳಾಗಬಾರದು ಎಂದರು. ವಿದ್ಯಾರ್ಥಿಗಳನ್ನು ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಸೀಮಿತಗೊಳಿಸಿದರೆ ಅವರು ಬರಿಯ ಚೀಲ ಗಳಾಗುತ್ತಾರೆ. ಅವರನ್ನು ಸಮೃದ್ಧ ಪೈರು ಬೆಳೆಯುವ ಭತ್ತದ ಗದ್ದೆ ಗದ್ದೆಗಳಂತಾಗಿಸಲು ಕಲಿಕೆ ಅನುಭವಗಳ ಜತೆಯಲ್ಲಿ ಸಾಗಬೇಕು ದೈನಂದಿನ ಜೀವನದ ಚಟುವಟಿಕೆಗಳೊಂದಿಗೆ ಕಲಿಕೆಯ ಅಂಶಗಳು ಸಮ್ಮಿಳಿತವಾಗಬೇಕು ತಾವೇ ನೋಡಿ ಕಲಿತ ಮಾಡಿ ಕಲಿತ ಮಕ್ಕಳಲ್ಲಿ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ ಸ್ವ ಅನುಭವಕ್ಕಿಂತ ದೊಡ್ಡ ಪಾಠ ಬೇರೊಂದಿಲ್ಲ ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಶಾಲೆಗಳಲ್ಲಿ ಹಾಕಿಕೊಂಡು ಕಾರ್ಯಗೊಳಿಸಲು ಚಿಂತಿಸಲಾಗಿದೆ.