ಬಣಕಲ್ :ಬಣಕಲ್ ನ ಕುವೆಂಪುನಗರದ ನಿವಾಸಿಯಾದ ಸೋಮನಾಥ್ 2ವರ್ಷದ ಹಿಂದೆ ಮರದಿಂದ ಬಿದ್ದು ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು . ಅವರಿಗೆ ಅಂದಿನಿಂದ ಪತ್ನಿಯ ನೆರವಿನಿಂದ ಹೆಜ್ಜೆ ಇಡುವ ಪರಿಸ್ಥಿತಿ ಬಂದಿದೆ. ಹಾಗೆ ಬಣಕಲ್ ನ ಚೇಗೂ ನಿವಾಸಿಯಾದ ಅಚ್ಚುತ ಪೂಜಾರಿ ಎಂಬುವರಿಗೆ ಕಳೆದ ಕೆಲದಿನಗಳಿಂದ ಸಕ್ಕರೆ ಕಾಯಿಲೆಗೆ ತುತ್ತಾಗಿ ಕಾಲುಗಳ ಸ್ವಾದಿನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು ಈ ಎರಡು ಕುಟುಂಬದವರ ಮನೆಗೆ ಭೇಟಿ ನೀಡಿದ ಮಧುಕುಮಾರ್ ವಾಣಿ ದಂಪತಿ ಮಗಳು ಜಾನವಿ ಮುಖಾಂತರ ನೆರವಿನ ಹಸ್ತ ನೀಡಿದರು ಇವರ ಮಾನವೀಯತೆಗೆ ಎರಡೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು
