ಬಣಕಲ್ : ತುಳು ನಾಟಕಗಳಂದರೆ ಬುಕ್ಕಿಂಗ್ ಮಾಡಿಡಬೇಕಾದ ದಿನಗಳಿದ್ದವು. ಟಿಕೆಟ್ ಕರೆದಿಸಿ ನೋಡಬೇಕಿದ್ದರೂ ನಾಟಕಗಳು ಹೌಸ್ ಫುಲ್ ಆಗಿರುತ್ತಿದ್ದವು ಆದರೆ ಕಳೆದ ಹತ್ತು ವರ್ಷಗಳಲ್ಲಿ ತುಳು ಸಿನಿಮಾದ ಗಾಳಿ ಜೋರಾದ ಬಳಿಕ ನಾಟಕಗಳು ಕಡಿಮೆಯಾಗಿದ್ದವು ಆದರೆ ತುಳುನಾಡಿನ ಖ್ಯಾತ ರಂಗ ಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತೆ ರಂಗಕ್ಕಿಳಿದಿದ್ದು ತುಳುನಾಟಕವನ್ನುಮತ್ತೆ ತಿರುಗಿನೋಡುವಂತೆ ಮಾಡಿದ್ದಾರೆ. ಶಿವದೂತೆ ಗುಳಿಗೆ ಎಂಬ ನಾಟಕ ತುಳುನಾಡಿನಾದ್ಯಂತ ಭರ್ಜರಿ ಪ್ರದರ್ಶನ ಕಂಡು ಜನಮೆಚ್ಚುಗೆಗೆ ಪಾತ್ರವಾಗಿದೆ.ತುಳುನಾಡಿನ ಆರಾಧ್ಯ ದೈವದ ಕತೆಯನ್ನು ನಾಟಕ ರೂಪದಲ್ಲಿ ಜನರಿಗೆ ತಿಳಿಹೇಳುವ ಪ್ರಯತ್ನ ನಿಜಕ್ಕೂ ಪ್ರಶಂಸನೀಯ.ಮೂಡಿಗೆರೆ ತಾಲ್ಲೂಕ್ಕಿನ ಮತ್ತಿಕಟ್ಟೆ ಗ್ರಾಮದಲ್ಲಿ ಗುರುವಾರ ರಾತ್ರಿ ಮತ್ತಿಕಟ್ಟೆ ಶಾಲಾ ಆವರಣದಲ್ಲಿ ಶಿವದೂತೆ ಗುಳಿಗೆ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು,ನಾಟಕವನ್ನು ವೀಕ್ಷಣೆ ಮಾಡಲು ಅಂತರ್ ಜಿಲ್ಲಾ ಕೇಂದ್ರಗಳಿಂದ ಜನಸಾಗರವೇ ಮತ್ತಿಕಟ್ಟೆಗೆ ಹರಿದುಬಂದಿತ್ತು. ರಾತ್ರೆ 8ಗಂಟೆಗೆ ನಾಟಕ ಪ್ರದರ್ಶನಗೊಂಡು 11ಗಂಟೆಗೆ ಮುಕ್ತಾಯ ಗೊಂಡಿತ್ತು .ಗುಳಿಗ ದೈವದ ಪಾಡ್ದನದ ಹಿನ್ನೆಲೆಯಲ್ಲಿ ನಾಟಕ ಸಾಗುತ್ತದೆ. ಈ ಮೂಲಕ ನಾಟಕಕ್ಕೊಂದು ದೈವಿಕ ನೈಜತೆಯನ್ನು ಕಟ್ಟಿಕೊಡಲು ಯತ್ನಿಸಲಾಗಿದೆ. ಗುಳಿಗನ ಹುಟ್ಟಿನ ಪೌರಾಣಿಕ ಹಿನ್ನೆಲೆ, ವಿಷ್ಣುವಿನ ಭೇಟಿ, ತಾಯಿಯ ಎದೆಯನ್ನು ಸೀಳಿಕೊಂಡು ಹೊರಬಂದು ಹಸಿವನ್ನು ನೀಗಿಸುವ ಅಲೆದಾಟ, ಕಾರಣಿಕಗಳ ಪ್ರದರ್ಶನ, ಕೋರಬ್ಬುವಿನ ಭೇಟಿ, ಬ್ರಹ್ಮ ರಕ್ಕಸ ಇತ್ಯಾದಿ ದೃಶ್ಯಗಳು ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು.
ನವ್ಯ, ಪೌರಾಣಿಕ ಅದ್ದೂರಿ ದೃಶ್ಯ ಸಂಯೋಜನೆಯ ಸಂಗಮ ಪೌರಾಣಿಕ ದೇವ, ದೇವತೆಗಳ, ರಾಮಾಯಣ ಮಹಾಭಾರತದ ಕತೆಗಳು ನಾಟಕ ರೂಪದಲ್ಲಿ ಮೂಡಿ ಬಂದು ವೇದಿಕೆಗಳಲ್ಲಿ ಅದ್ದೂರಿಯಾಗಿ ಪ್ರದರ್ಶನಗೊಳ್ಳುವುದು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುತ್ತದೆ. ಆದರೆ ತುಳುನಾಡಿನ ಆರಾಧ್ಯ ದೈವಗಳ ಅದ್ದೂರಿಯ ನಾಟಕ ಪ್ರದರ್ಶನವಾಗುವುದು ಬಹಳ ಕಡಿಮೆ. ಈಗ ವಿಜಯ ಕುಮಾರ್ ಕೊಡಿಯಾಲ್ಬೈಲ್ ಅವರು ತಮ್ಮ “ಶಿವದೂತ ಗುಳಿಗ’ ನಾಟಕದ ಮೂಲಕ ಈ ಕೊರತೆಯನ್ನು ನೀಗಿಸಿದ್ದಾರೆ. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ದೈವಗಳ ಬಗ್ಗೆಯೂ ಈ ರೀತಿಯ ನಾಟಕಗಳನ್ನು ರಚಿಸಬಹುದು ಎಂಬ ಮಾರ್ಗದರ್ಶನ ಮಾಡಿದ್ದಾರೆ.
ದೈವದ ಬಗ್ಗೆ ತಿಳುವಳಿಕೆಯೇ ಇಲ್ಲದ ಆಧುನಿಕ ಮನೋಭಾವನೆಯ ಯುವಕನೋರ್ವನಿಗೆ ಗುಳಿಗ ದೈವದ ಕತೆಯನ್ನು ಹೇಳುವ ದೃಶ್ಯದೊಂದಿಗೆ ಆರಂಭವಾಗುವ ಈ ನಾಟಕವು ಮೈ ನವಿರೇಳಿಸುವ ದೃಶ್ಯಗಳಿಂದ ಕೂಡಿತ್ತು. ಕೈಲಾಸ, ವೈಕುಂಠ, ಪುರಾತನ ಕಾಲದ ಮನೆ, ದೈವಸ್ಥಾನ ಇತ್ಯಾದಿ ದೃಶ್ಯಾವಳಿಗಳನ್ನು ಕಾಯುವ ಅವಕಾಶವನ್ನೇ ಕೊಡದೆ ಒಂದೆರಡು ನಿಮಿಷಗಳಲ್ಲಿಯೇ ಬದಲಿಸಿ ಬಿಡುವ ಕೈ ಚಳಕ ಅದ್ಭುತ. ನವ್ಯ ಮತ್ತು ಪೌರಾಣಿಕ ನಾಟಕದ ದೃಶ್ಯ ಸಂಯೋಜನೆಯ ಸಮ್ಮಿಳನ ಮನಮೋಹಕವಾಗಿತ್ತು.
ಗುಳಿಗ ದೈವದ ಪಾಡªನದ ಹಿನ್ನೆಲೆಯಲ್ಲಿ ಈ ನಾಟಕವು ಸಾಗುತ್ತದೆ. ಈ ಮೂಲಕ ನಾಟಕಕ್ಕೊಂದು ದೈವಿಕ ನೈಜತೆಯನ್ನು ಕಟ್ಟಿಕೊಡಲು ಯತ್ನಿಸಲಾಗಿರುವುದು ಪ್ರಶಂಸನೀಯವಾಗಿತ್ತು. ಗುಳಿಗನ ಹುಟ್ಟಿನ ಪೌರಾಣಿಕ ಹಿನ್ನೆಲೆ, ವಿಷ್ಣುವಿನ ಭೇಟಿ, ತಾಯಿಯ ಎದೆಯನ್ನು ಸೀಳಿಕೊಂಡು ಹೊರಬಂದು ಹಸಿವನ್ನು ನೀಗಿಸುವ ಅಲೆದಾಟ, ವಿವಿಧೆಡೆಗಳಲ್ಲಿ ಕಾರಣಿಕಗಳ ಪ್ರದರ್ಶನ, ಕಾರಣಿಕ ದೈವ ಕೋಡಿಕಂಡಾಲ ಕೋರªಬ್ಬುವಿನ ಭೇಟಿ, ಬ್ರಹ್ಮ ರಕ್ಕಸ ಇತ್ಯಾದಿ ದೃಶ್ಯಗಳು ಪ್ರೇಕ್ಷಕರನ್ನು ಕುತೂಹಲದಿಂದ ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುವಲ್ಲಿ ವಿಜಯಕುಮಾರ್ ಯಶಸ್ವಿಯಾಗಿದ್ದಾರೆ
ಶಿವದೂತ ಗುಳಿಗನ ಕಾರಣಿಕವನ್ನು ಎರಡೂವರೆ ಗಂಟೆಗಳ ಸೀಮಿತ ಅವಧಿಯಲ್ಲಿ ಕಟ್ಟಿಕೊಟ್ಟ ಕೊಡಿಯಾಲ್ಬೈಲ್ ಅವರು ಮುಂದಿನ ದಿನಗಳಲ್ಲಿ ನಾಟಕ ಪ್ರದರ್ಶಿತವಾಗುವ ಪ್ರದೇಶದ ಪ್ರಾದೇಶಿಕ ಗುಳಿಗನ ಕತೆಗೆ ಅನುಗುಣವಾಗಿ ದೃಶ್ಯ ವಿಸ್ತರಣೆ ಅವಕಾಶವನ್ನು ಮುಕ್ತವಾಗಿ ಇರಿಸಿಕೊಂಡಿದ್ದಾರೆ ಎಂದು ಅನಿಸುತ್ತಿದೆ.ಮಲೆನಾಡಿನ ಮತ್ತಿಕಟ್ಟೆಯಲ್ಲಿ ಪ್ರಥಮ ಪ್ರದರ್ಶನ ಯಶಸ್ವಿಯಾಗಿ ಮುಗಿಸಿತು..ಈ ನಾಟಕದ ಪ್ರತಿಯೊಂದು ದೃಶ್ಯವು ಚಪ್ಪಾಳೆಗಳ ಪ್ರಶಂಸೆಯನ್ನು ಗಳಿಸಿತು.