ಕಾಫಿ ನಾಡಿನ ದೊರೆ ಸಿದ್ದಾರ್ಥ್ ವನದಲ್ಲಿ ಸಿದ್ದಾರ್ಥ್ ಕೆಫೆ ಉದ್ಘಾಟನೆ
ಮೂಡಿಗೆರೆ :ಲಕ್ಷಾಂತರ ಜನರ ಪಾಲಿಗೆ ಅನ್ನದಾತ ಕಾಫಿ ಡೇ ಸಾಮ್ರಾಜ್ಯದ ಸಾಮ್ರಾಟ ಪಾಶ್ಚಿಮತ್ಯ ಕೆಫೆ ಸಂಸ್ಕೃತಿಯನ್ನು ಭಾರತಕ್ಕೆ ಪರಿಚಯಿಸಿದ್ದ ನವೋದ್ಯಮಿ ವಿಜಿ ಸಿದ್ದಾರ್ಥ್ ಹೆಗಡೆಯವರ 2ನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಸಿದ್ದಾರ್ಥ್ ವನದ ಬಳಿ ಸಿದ್ದಾರ್ಥ್ ಕೆಫೆ ಯನ್ನು ಲೋಕಾರ್ಪಣೆ ಮಾಡಲಾಯಿತು.
ಕಳೆದ ವರ್ಷ ಅವರ ಕುದ್ರೆಗುಂಡಿ ಎಸ್ಟೇಟ್ ಬಳಿ ಶ್ರೀ ದಿ: ಸಿದ್ಧಾರ್ಥ್ ಹೆಗ್ಡೆ ಅವರ ಪುತ್ಥಳಿ ನಿರ್ಮಿಸಿ ಸಿದ್ದಾರ್ಥ ವನವನ್ನು ನಿರ್ಮಿಸಿದ್ದರು, ಇಂದು ಅದೇ ಜಾಗದ ಪಕ್ಕದಲ್ಲಿ ಸಿದ್ದಾರ್ಥ ಕೆಫೆಯನ್ನು ನಿರ್ಮಿಸಿ ಇಂದು ಅದನ್ನು ಉಪಸಭಾಪತಿಗಳಾದ ಎಂಕೆ ಪ್ರಾಣೇಶ್ ರವರು ಉದ್ಘಾಟಿಸಿ ಲೋಕಾರ್ಪಣೆ ಗೊಳಿಸಿದರು.
ಈ ಸಂದರ್ಭದಲ್ಲಿ ಹಾಲಪ್ಪ ಗೌಡರು,
ಗೋಪಾಲಗೌಡ,
ಮಗ್ಗಲಮಕ್ಕಿ ಗಣೇಶ್ ರತನ್ ಊರುಬಗೆ ಉಪಸ್ಥಿತರಿದ್ದರು