ಮೃತ ಪಟ್ಟ ಹಸುವಿನ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಬಣಕಲ್ ಯುವಕರು

ಇಂದಿನ ದಿನಗಳಲ್ಲಿ ಮಾನವೀಯತೆ ,ಮನುಷ್ಯ ಧರ್ಮವನ್ನೇ ಮರೆತಿರುವಾಗ ಹಸುವೊಂದು ವಿಷಕಾರಿ ವಸ್ತುವನ್ನು ತಿಂದು ಅಸ್ವಸ್ಥವಾಗಿ ಸಾವು ಕಂಡಾಗ ಆ ಹಸುವನ್ನು ವಿಶೇಷ ರೀತಿಯಲ್ಲಿ ಪೂಜಿಸಿ ಬಣಕಲ್ ಯುವಕರ ಪಡೆಯೊಂದು ಅಂತ್ಯ ಸಂಸ್ಕಾರ ನಡೆಸಿದ ಘಟನೆ ಬಣಕಲ್ ನಲ್ಲಿ ನಡೆದಿದೆ.

ಬಣಕಲ್ ನ ಮುಖ್ಯ ರಸ್ತೆಯಲ್ಲಿ ರಾತ್ರೆವೇಳೆಯಲ್ಲಿ ಯಾವುದೊ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಹಸುವೊಂದು ರಸ್ತೆಯಲ್ಲಿಬೆಳಗಿನ ಜಾವದವರೆಗೆ ಅಸ್ವಸ್ಥವಾಗಿ ಅಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದೆ . ಇದನ್ನು ಗಮನಿಸಿದ ಬಣಕಲ್ ಯುವಕರಾದ ಅಶೋಕ. ಹರೀಶ್. ಫಾರೂಕ್ ಆಗಮಿಸಿ ಸಾವನ್ನಪ್ಪಿದ ಹಸುವಿನ ಅಂತ್ಯ ಸಂಸ್ಕಾರವನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.