ಮೂಡಿಗೆರೆ :ಗ್ರಾಮೀಣ ಭಾಗದಲ್ಲಿ ಈ ಯೋಜನೆ ಆರಂಭಿಸಿರುವುದರಿಂದ ಜನರು ಪಟ್ಟಣ ಮತ್ತು ಇನ್ನಿತರ ಕಛೇರಿಗೆ ಅಲೆದಾಡಲು ತಪ್ಪುತ್ತದೆ ಎಂದು ಜಾವಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ ಅಭಿಪ್ರಾಯ ಪಟ್ಟಿದ್ದಾರೆ
ಜಾವಳಿ ಗ್ರಾಮದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆದ ನೂತನ (csc) ಸಾಮಾನ್ಯ ಸೇವಾ ಕೇಂದ್ರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು ಹಾಗೂ ತಾಲ್ಲೂಕು ಯೋಜನಾ ಕಚೇರಿಯ ಪ್ರಬಂದಕರಾದ ಅಣ್ಣಾ ಗೌಡ್ರು ಮಾತಾನಾಡಿ ಇಡೀ ರಾಜ್ಯದಲ್ಲಿ ಯೋಜನೆ ಮೂಲಕ ಪ್ರತಿ ಗ್ರಾಮದಲ್ಲಿ ಸೇವಾ ಕೇಂದ್ರ ಆರಂಭವಾಗಲಿದೆ ಇದನ್ನು ಜನ ಸಾಮನ್ಯರು ಪ್ರಯೋಜನ ಪಡೆದುಕೊಳ್ಳಬೇಕು ವಾರದ 6 ದಿನ ಕಛೇರಿ ಕಾರ್ಯ ನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಚಿತ್ತರಂಜನ್ ಹಾಗೂ ವಿಪತ್ತು ನಿರ್ವಹಣಾ ತಂಡದ ಪರೀಕ್ಷಿತ್ ಜಾವಳಿ ,ನರೇಂದ್ರ ,ಸವೀನ್, ಸಂದೀಪ್,ಒಕ್ಕೂಟದ ಅಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳು ಹಾಗೂ ಸೇವಪ್ರತಿನಿದಿಗಳಾದ ಸಂದೀಪ್ ,ವಿರೇಂದ್ರ,ಅನಿತಾ ಸುವಿಧ ಸಹಾಯಕರಾದ ರಾಜೇಶ್ವರಿ ಗ್ರಾಮಸ್ಥರಾದ ಬಿ.ಕೆ.ರವಿ, ಕ್ರಷ್ಣ ಟೈಲರ್, ನಿಶ್ಚಿತ್, ತ್ಯಾಗರಾಜ್,ಸುಬ್ರಮಣ್ಯ,ವನ್ನೇಶ್ ಉಪಸ್ಥಿತರಿದ್ದರು.
